ಬಾಬಾಬುಡನ್ ಗಿರಿ ಉರುಸ್ ಗೆ ಚಾಲನೆ
ಮೊದಲ ದಿನ ಫಕೀರರು ಗೋರಿಗಳಿಗೆಗಂಧ ಲೇಪಿಸಿ, ವಿವಿಧ ವಿಧಿ ವಿಧಾನ ನೆರವೇರಿಸಿದರು. ಗೋರಿಗಳಿಗೆ ಲೇಪಿಸುವ ಗಂಧವನ್ನು ಬಡಾಮಕಾನ್ ಮಸೀದಿ ಹಾಗೂ ಅತ್ತಿಗುಂಡಿ ಗ್ರಾಮದಲ್ಲಿ ತಯಾರಿಸಲಾಗುತ್ತದೆ. ಭಕ್ತರು ತಾವು ತಂದಿದ್ದ ಹೂವು, ಸಕ್ಕರೆ, ತೆಂಗಿನಕಾಯಿಗಳನ್ನು ಅರ್ಪಿಸಿ, ಗಂಧ ಲೇಪಿಸಿದರು. ಜಿಲ್ಲಾಡಳಿತ ವತಿಯಿಂದ ಭಕ್ತರಿಗೆ ಪ್ರಸಾದ ನೀಡಲಾಗುತ್ತಿದೆ.
ಇನಾಂ ದತ್ತಾತ್ರೇಯ ಪೀಠ ಗುಹೆಯ ದುರಸ್ತಿ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ,ಗುಹೆಯಲ್ಲಿ ಯಾವುದೇ ಧಾರ್ಮಿಕ ವಿಧಿವಿಧಾನಗಳು ಕೆಲ ತಿಂಗಳುಗಳಿಂದ ನಡೆಯುತ್ತಿರಲಿಲ್ಲ. ಸಂದಲ್ ಉರುಸ್ ನ ಕಾರಣ ಭಕ್ತಾದಿಗಳಿಗೆ ಗುಹೆಗೆ ಪ್ರವೇಶವನ್ನು ಜಿಲ್ಲಾಡಳಿತ ಕಲ್ಪಿಸಿದೆ.ಗುಹೆ ಪ್ರವೇಶಕ್ಕೆ ಸಂಘ ಪರಿವಾರದ ವಿರೋಧ ಇರುವ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಡಿವೈಎಸ್ ಪಿ ಪುಟ್ಟಮಾದಯ್ಯ ಹಾಗೂ ಜಿಲ್ಲಾ ಉಪ ವಿಭಾಗೀಯ ದಂಡಾಧಿಕಾರಿ ದಯಾನಂದ್ ಅವರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಸುಮಾರು 500ಕ್ಕೂ ಹೆಚ್ಚು ಜನ ಪೊಲೀಸರು ಬಾಬಬುಡನ್ ಗಿರಿಯಿಂದ ಹೊನ್ನಮ್ಮನ ಹಳ್ಳದ ವರೆಗೂ ಕಾವಲು ನಿಂತಿದ್ದಾರೆ.