ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಜಧಾನಿಯಲ್ಲಿ ಕನ್ನಡಿಗರ ಸಂಖ್ಯೆ ಕ್ಷೀಣ, ಸಿಂಧ್ಯಾ
ನಗರದಲ್ಲಿ ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡುತ್ತಾ ಸಿಂಧ್ಯಾ, ಕಳೆದ 40ವರ್ಷಗಳಲ್ಲಿ ಬೆಂಗಳೂರಿನಲ್ಲಿ ಜನಸಂಖ್ಯೆ ಮಾತ್ರ ಬೆಳವಣಿಗೆ ಕಂಡಿದೆ. ಇಂತಹ ಸನ್ನಿವೇಶದಲ್ಲಿ ಕನ್ನಡ ಭಾಷಿಗರ ಬೆಳವಣಿಗೆಯ ದೃಷ್ಟಿಯಲ್ಲಿ ಸಾಹಿತ್ಯ ಪರಿಷತ್ ಕ್ರಿಯಾಶೀಲ ಯೋಜನೆ ರೂಪಿಸಬೇಕಾಗಿದೆ. ಮುಂದೆ ಬೆಂಗಳೂರಿನಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಹಣವನ್ನು ಕೂಡಿಸುವುದು ಕಷ್ಟದ ಕೆಲಸವಲ್ಲ, ಜನರಲ್ಲೂ ಕೂಡಿಸುವುದು ಕಷ್ಟಕರ, ಜನ ಸಾಮಾನ್ಯರು ಕನ್ನಡ ಉಳಿಸುವ ಕೆಲಸಕ್ಕೆ ಮುಂದಾಗಬೇಕಾಗಿದೆ. ನಮ್ಮ ಭಾಷೆಗೆ ಒಂದು ಸತ್ವವಿದೆ. ಕನ್ನಡ ನಾಡು, ನುಡಿ,ಜಲ, ನೆಲದ ಬಗ್ಗೆ ಚಿಂತನೆ ಮಾಡುವ ವೇದಿಕೆಗಳು ಮುಕ್ತಾಯವಾಗದೆ ನಿರಂತರವಾಗಿ ಸಾಗಲಿ ಎಂದು ಕಾರ್ಯಕ್ರಮದಲ್ಲಿ ಹಾಜರಿದ್ದ ರಾಜ್ಯ ಕಾಂಗ್ರೆಸ್ ಕಾರ್ಯಾಧ್ಯಕ್ಷಅಡಿ ಕೆ ಶಿವಕುಮಾರ್ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
Comments
ಜೆಡಿಎಸ್ dk shivakumar ಡಿಕೆ ಶಿವಕುಮಾರ್ ರಾಮನಗರ kannadigas ramanagara kanakapura ಕನಕಪುರ ಕನ್ನಡಿಗರು pgr sindhia ಪಿಜಿಆರ್ ಸಿಂಧ್ಯಾ
Story first published: Tuesday, March 2, 2010, 10:56 [IST]