ಬುಧವಾರ ರಂಗಶಂಕರದಲ್ಲಿ ಜುಗಾರಿ ಕ್ರಾಸ್
ಸಮುದಾಯದ ಇತ್ತೀಚಿನ ಅತಿ ಜನಪ್ರಿಯ ನಾಟಕ " ಜುಗಾರಿ ಕ್ರಾಸ್" ಇದೇ ಮಾರ್ಚಿ 3 ನೇ ತಾರೀಖು ರಂಗ ಶಂಕರದಲ್ಲಿ ಸಂಜೆ 7.30 ಕ್ಕೆ ಪ್ರದರ್ಶನಗೊಳ್ಳುತ್ತಿದೆ. ಬನ್ನಿ ನಾಟಕ ನೋಡುವಿರಂತೆ.
ನಾಟಕದ ಬಗ್ಗೆ :
ಪೂರ್ಣಚಂದ್ರ ತೇಜಸ್ವಿಯವರ ಕಾದಂಬರಿ ಆಧಾರಿತ ಈ ನಾಟಕ ಕೇವಲ 24 ಗಂಟೆಗಳಲ್ಲಿ ನಡೆಯುವ ಒಂದು ರೊಮ್ಯಾಂಟಿಕ್ ಥ್ರಿಲ್ಲರ್. ಜತೆಗೆ, ಇದು ನಿಜವಾಗಿಯೂ ಸಹ್ಯಾದ್ರಿಯ ಕಾಡುಗಳ ತಪ್ಪಲಿನಲ್ಲಿ ನಡೆಯಬಹುದಾದ ವಾಸ್ತವ ನೆಲೆಗಟ್ಟಿನ ಸಾಮಾಜಿಕ ಕಾದಂಬರಿ.
ಕಾಡಿನಲ್ಲಿರುವ ಲಕ್ಷಾಂತರ ಬೆಲೆಬಾಳುವ ಮರಗಳು ಮತ್ತಿತರ ನೈಸರ್ಗಿಕ ಸಂಪತ್ತು ಕಾಳ ದಂಧೆಗಳ ತವರೂರಾಗುವುದು, ಕಾಡಿನಿಂದ ಉತ್ಪತ್ತಿಯಾಗುವ ಕಾಳಧನ ದೇಶದ ರಾಜಕೀಯವನ್ನೇ ನಿಯಂತ್ರಿಸುವುದು, ಈ ಕಾಳ ವ್ಯವಹಾರಗಳ ಜೊತೆಜೊತೆಗೇ ಡ್ರಗ್ಸ್ ಮಾಫಿಯಾ ಜೂಜು ಸೇರಿ, ಅನೇಕ ವೇಳೆ ಇದ್ಯಾವುದಕ್ಕೂ ಸಂಬಂಧಿಸದ ಮುಗ್ಧರನ್ನೂ ಪ್ರಾಣಾಪಾಯದ ಅಂಚಿಗೆ ತಳ್ಳಬಹುದು ಎಂಬುದೇ ಈ ಕಥೆಯ ಹಿನ್ನೆಲೆ.
ಏಲಕ್ಕಿ ಬೆಳೆಗಾರ ಸುರೇಶ ಮತ್ತು ಅವನ ಹೆಂಡತಿ ಗೌರಿ ಏಲಕ್ಕಿ ವ್ಯಾಪಾರಕ್ಕೆಂದು ಪೇಟೆಗೆ ಬಂದವರು, ಅವರಿಗೇ ತಿಳಿಯದೇ ಕಳ್ಳ ದಂಧೆಗೆ ಸಿಕ್ಕಿಕೊಂಡು ಕ್ಷಣ ಕ್ಷಣಕ್ಕೂ ರೋಚಕವಾಗಿ ಸಾಗುವ, ಬೆಚ್ಚಿಬೀಳಿಸುವ ಅಂಡರ್ವರ್ಲ್ಡ್ನ ಕಥೆಯೊಂದಿಗೆ ಹೆಣೆದುಕೊಂಡಿರುವ ನಾಟಕವೇ ಜುಗಾರಿ ಕ್ರಾಸ್.
*
ನಾಟಕ
:
ಜುಗಾರಿ
ಕ್ರಾಸ್
*
ರಚನೆ
:
ಕೆ.
ಪೂರ್ಣಚಂದ್ರ
ತೇಜಸ್ವಿ
*
ನಾಟಕ
ರೂಪ
ಮತ್ತು
ನಿರ್ದೇಶನ
:
ನಟರಾಜ್
ಹೊನ್ನವಳ್ಳಿ
*
ಸಂಗೀತ
:
ಗಜಾನನ
ಟಿ.ನಾಯ್ಕ
*
ಸ್ಥಳ
:
ರಂಗಶಂಕರ
*
ದಿನಾಂಕ/ವಾರ
:
03.03.2010/ಬುಧವಾರ
*
ಸಮಯ
:
ಸಂಜೆ
7.30
ಟಿಕೆಟ್ ಮತ್ತಿತರ ಮಾಹಿತಿಗಾಗಿ ಸಂಪರ್ಕ : ವೆಂಕಟೇಶ್ ಪ್ರಸಾದ್ : 99001 82400, 98807 31982