ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವಿಧಾನಮಂಡಲ:ಸಿಎಂ ಜೊತೆ ರೇವಣ್ಣ ಬಿಸಿ ಚರ್ಚೆ
ವಿದ್ಯುತ್ ಸಮಸ್ಯೆ ಕುರಿತು ಚರ್ಚೆಯಲ್ಲಿ ಪಾಲ್ಗೊಂಡಿದ್ದ ರೇವಣ್ಣ, ಬಳ್ಳಾರಿಯಲ್ಲಿ ಎರಡನೇ ಘಟಕ, ವಾರಾಹಿ, ನಾಗಾರ್ಜುನ ಯೋಜನೆಗೆ ಚಾಲನೆ ನೀಡಿದ್ದು ನಮ್ಮ ಸರಕಾರ ಸ್ವಾಮಿ.ನೀವು18 ತಿಂಗಳಲ್ಲಿ ಏನು ಸಾಧನೆ ಮಾಡಿದ್ದೀರಾ ಹೇಳಿ ಎಂದು ಕುಮಾರಸ್ವಾಮಿಗಳ ಅಧಿಕಾರ ಅವಧಿಯಲ್ಲಿ ಕೈಗೆತ್ತಿಕೊಂಡಿದ್ದ ಯೋಜನೆಗಳ ಪಟ್ಟಿಯನ್ನು ಆಡಳಿತ ಪಕ್ಷಗಳಿಗೆ ನೀಡಿದರು.
ಬಳ್ಳಾರಿಯಲ್ಲಿ ವಿದ್ಯುತ್ ಘಟಕ ಸ್ಥಾಪಿಸಿದ್ದು ನಾವು. ನೀವು ಆಡ್ವಾಣಿ ಅವರನ್ನು ಕರೆಸಿ ಶಂಕುಸ್ಥಾಪನೆ ಮಾಡಿಸಿದ್ರಿ. ಶಂಕುಸ್ಥಾಪನೆ, ಉದ್ಘಾಟನೆ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ವಾರಾಹಿ ಯೋಜನೆಯನ್ನು ಪೂರ್ಣಗೊಳಿಸಿಮಾನ್ಯ ಮುಖ್ಯಮಂತ್ರಿಗಳೇ ಅದನ್ನು ಉದ್ಘಾಟಿಸಲಿ ಎಂದು ಕೀಲಿ ಕೈ ಕೊಟ್ಟಿದ್ದೇನೆ ಎಂದು ತಮ್ಮ ಎಂದಿನ ದಾಟಿಯಲ್ಲಿ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.
Comments
ಎಚ್ ಡಿ ರೇವಣ್ಣ ಮುಖ್ಯಮಂತ್ರಿ ಯಡಿಯೂರಪ್ಪ ಅಧಿವೇಶನ ವಿಧಾನಸೌಧ ಬಜೆಟ್ ವಿದ್ಯುತ್ ಬಳ್ಳಾರಿ hd revanna karnataka cm yediyurappa assembly session budget
Story first published: Tuesday, March 2, 2010, 17:47 [IST]