ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಚರ್ಚೆಗೆ ಬನ್ನಿ ಇಲ್ಲದಿದ್ದರೆ ಯುದ್ಧಕ್ಕೆ ಸಿದ್ಧರಾಗಿ
ಮುಂಬೈ ದಾಳಿ ಬಳಿಕ ಉಭಯ ದೇಶಗಳ ವಿದೇಶಾಂಗ ಕಾರ್ಯದರ್ಶಿ ಮಟ್ಟದ ಮೊದಲ ಅಧಿಕೃತ ಮಾತುಕತೆ ನವದೆಹಲಿಯಲ್ಲಿ ಫೆ. 25 ರಂದು ನಡೆದಿರುವ ಮಧ್ಯೆಯೂ ಭಾರತಕ್ಕೆ ಯುದ್ದ ಬೇಕಾಗಿದೆ ಎಂದು ಉಗ್ರ ಹಫೀಜ್ ಟಿವಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದಾನೆ. ಮುಂಬೈ ದಾಳಿಯ ಆರೋಪಿ ಎಂದು ಭಾರತ ಯಾವುದೇ ನ್ಯಾಯಾಲಯದಲ್ಲಾದರೂ ಸಾಬೀತುಪಡಿಸಿದರೆ ಒಪ್ಪಿಕೊಳ್ಳಲು ಸಿದ್ಧ ಎಂದಿದ್ದಾನೆ.
ಭಾರತದ ವಿರುದ್ಧ ಜಿಹಾದ್ ಗಾಗಿ ಜನ ಕಾಶ್ಮೀರಕ್ಕೆ ತೆರಳಬೇಕೇ ಎಂದಿದ್ದಕ್ಕೆ ಅದರಲ್ಲಿ ಸಂದೇಹವೇ ಇಲ್ಲ. ಅದು ಆಗಲೇಬೇಕು ಎಂದು ಹೇಳಿದ್ದಾನೆ. ಸಂದರ್ಶನದಲ್ಲಿ ಸಯೀದ್ ಮುಖವನ್ನು ಮುಚ್ಚಿ ಹಿಂಬದಿಯಿಂದ ಆತನ ಹೆಗಲಿನ ಭಾಗವನ್ನು ಮಾತ್ರ ತೋರಿಸಲಾಯಿತು. ಷರಿಯ ಅಥವಾ ಇಸ್ಲಾಂ ಕಾನೂನಿನಲ್ಲಿ ಮುಖ ತೋರಿಸಲು ಅವಕಾಶವಿಲ್ಲ ಎಂದು ಆತ ಈ ಸಂದರ್ಭದಲ್ಲಿ ಸಮರ್ಥಿಸಿಕೊಂಡಿದ್ದಾನೆ.
Comments
ಭಾರತ pakistan ಪಾಕಿಸ್ತಾನ ಮುಂಬೈ ಭಯೋತ್ಪಾದನೆ mumbai terror attack ಹಫೀಜ್ ಸಯೀದ್ ಜಮ್ಮು ಮತ್ತು ಕಾಶ್ಮೀರ jammu and kashmir
Story first published: Monday, March 1, 2010, 12:19 [IST]