ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬೂಕನಕೆರೆ ಯಡಿಯೂರಪ್ಪಗೆ ಶಿವ ಒಳ್ಳೆದು ಮಾಡಲಿ!
ಪೂಜೆ ಸಲ್ಲಿಕೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ,"ಹುಟ್ಟುಹಬ್ಬದಂದು ದೇವಸ್ಥಾನಕ್ಕೆ ಹೋಗುವುದು ವಾಡಿಕೆ. ರಾಜ್ಯದ ಜನ ಅಧಿಕಾರ ಕೊಟ್ಟಿದ್ದಾರೆ. ಪುಣ್ಯಕೋಟಿ ನಾಡಿದು ಎಲ್ಲರೂ ಮೆಚ್ಚುವ ರೀತಿಯಲ್ಲಿ ಅಭಿವೃದ್ಧಿ ಕಾರ್ಯ ಮಾಡುವ ಶಕ್ತಿ ಕೊಡಲಿ, ಮಾ. 5 ರಂದು ಒಳ್ಳೆ ಬಜೆಟ್ ಕೊಡಲಿದ್ದೇನೆ" ಎಂದು ಹೇಳಿದರು.
ಪುತ್ರ ಬಿ.ವೈ.ರಾಘವೇಂದ್ರ, ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸೇರಿದಂತೆ ಸಚಿವ ಸಂಪುಟದ ಸಹೋದ್ಯೋಗಿಗಳು ಬೆಳಗ್ಗಿನಿಂದಲೇ ಸಿಎಂ ಅವರ ಹುಟ್ಟುಹಬ್ಬದ ಸಂಭ್ರಮಾಚರಣೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ರಾಜ್ಯದ ವಿವಿಧೆಡೆ ಇಂದು ಯಡಿಯೂರಪ್ಪ ಅವರ ಹುಟ್ಟುಹಬ್ಬದ ಪ್ರಯುಕ್ತ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
Comments
bjp bengaluru ಬಿಜೆಪಿ ಬೆಂಗಳೂರು ಹುಟ್ಟುಹಬ್ಬ ಯಡಿಯೂರಪ್ಪ birthday b y raghavendra karnataka cm ಮುಖ್ಯಮಂತ್ರಿ yediyurappa
Story first published: Saturday, February 27, 2010, 13:21 [IST]