ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಬಜೆಟ್: ಇಂಧನ, ಕಾರು, ಸಿಗರೇಟ್ ಹೆಚ್ಚಳ

By Mrutyunjaya Kalmat
|
Google Oneindia Kannada News

Pranab unveils roadmap for GST, direct tax code
ನವದೆಹಲಿ, ಫೆ. 26 : ಕೇಂದ್ರದ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ತೆರಿಗೆ ಯಥಾ ಸ್ಥಿತಿಯಲ್ಲಿ ಕಾಯ್ದುಕೊಂಡರೆ, ಪಾರೀಖ್ ಸಮಿತಿ ಶಿಫಾರಸ್ ಅನ್ನು ಪರಿಶೀಲನೆ ಮಾಡುವುದಾಗಿ ಹೇಳಿರುವ ಅವರು ತೈಲೋತ್ಪನ್ನ ಬೆಲೆಗಳ ಏರಿಕೆಯನ್ನು ಖಚಿತಪಡಿಸಿದ್ದಾರೆ.

ಇದರ ಜೊತೆಗೆ ಕಾರು, ಸಿಮೆಂಟ್ ಹಾಗೂ ಸಿಗರೇಟ್ ಬೆಲೆಗಳು ಏರಿಕೆ. ಕಂಪನಿಗಳ ಮೇಲಿನ ತೆರಿಗೆ ಹೆಚ್ಚಳ ಹಾಗೂ 1.60 ಲಕ್ಷ ರುಪಾಯಿವರೆಗೆ ಯಾವುದೇ ತೆರಿಗೆ ಇಲ್ಲ ಎಂದು ಅವರು ತಿಳಿಸಿದ್ದಾರೆ. ಈ ಮಧ್ಯೆ ತೈಲ ಸುಂಕ ಹೆಚ್ಚಳ ವಿರೋಧಿಸಿ ಬಿಜೆಪಿ ಮತ್ತು ಅಂಗ ಪಕ್ಷಗಳು ಪ್ರತಿಭಟನೆ ನಡೆಸಿದವು. ಆಗ ಕೆಲ ಕಾಲ ಲೋಕಸಭೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಬಜೆಟ್ ನ ಮುಖ್ಯಾಂಶಗಳು:
*ಪೆಟ್ರೋಲ್,ಡಿಸೇಲ್ ಬೆಲೆಗಳು ಹೆಚ್ಚಳ ಸಂಭವ
*ಆದಾಯ ತೆರಿಗೆ ರಿಟರ್ಸ್ ಸಲ್ಲಿಸಲು ಸರಳ್ 2 ಅರ್ಜಿ ನಮೂನೆ.
*ಆದಾಯ ತೆರಿಗೆ ವಿನಾಯಿತಿ ಮಿತಿ ಬದಲಿಲ್ಲ.
*1.6 ಲಕ್ಷ ರುಪಾಯಿವರೆಗೆ ತೆರಿಗೆ ಇಲ್ಲ. ತೆರಿಗೆ ಸ್ಲಾಬ್ ವಿಸ್ತರಣೆ.
*1.6 ಲಕ್ಷ ದಿಂದ 5 ಲಕ್ಷ ರುಪಾಯಿವರೆಗೆ ಶೇ. 10 ತೆರಿಗೆ.
*5 ಲಕ್ಷ ದಿಂದ 8 ಲಕ್ಷ ರುಪಾಯಿವರೆಗೆ ಶೇ. 20 ತೆರಿಗೆ.
*8 ಲಕ್ಷಕ್ಕಿಂತ ಅಧಿಕ ಆದಾಯಕ್ಕೆ ಶೇ. 30 ತೆರಿಗೆ.
*7.46 ಲಕ್ಷ ಕೋಟಿ ತೆರಿಗೆ ಸಂಗ್ರಹ ಗುರಿ.
*2010-1 ರಲ್ಲಿ ವಿತ್ತೀಯ ಕೊರತೆ 5.5 ನಿರೀಕ್ಷೆ.
*ನಕ್ಸಲ್ ಪೀಡಿತಜಿಲ್ಲೆಗಳ ಅಭಿವೃದ್ದಿಗೆ ಕ್ರಮ.
*ಈ ವರ್ಷಾಂತ್ಯಕ್ಕೆ ಗುರುತಿನ ಚೀಟಿ ವಿತರಣೆ ಆರಂಭ
*ಕಂಪನಿಗಳ ಮೇಲೆ ವಿಧಿಸುವ ಸರ್ಚಾರ್ಜ್ ಶೇ. 10 ರಿಂದ ಶೇ. 7ಕ್ಕೆ ಇಳಿಕೆ.
*ಕಂಪನಿಗಳ ಮೇಲೆ ವಿಧಿಸುವ ತೆರಿಗೆ ಶೇ. 15 ರಿಂದ 18ಕ್ಕೆ ಏರಿಕೆ.
*ರಕ್ಷಣಾ ಇಲಾಖೆಗೆ 1,47,000ಕೋಟಿ ರುಪಾಯಿ.
*ಮಹಿಳಾ ಕೃಷಿನಿಧಿ ಯೋಜನೆ 100 ಕೋಟಿ ರುಪಾಯಿ.
*ರಾಷ್ಟ್ರೀಯ ನ್ಯಾಯದಾನ ಮಿಷನ್ ಸ್ಥಾಪನೆ.
*ಅಬಕಾರಿ ಸುಂಕ ಶೇ. 8ರಿಂದ 10 ಕ್ಕೆ ಏರಿಕೆ.
*ಸಿಗರೇಟು ಮತ್ತಷ್ಟುತುಟ್ಟಿ.
*ತೈಲಕ್ಕೆ ಅಬಕಾರಿ ಸುಂಕ ಶೇ.1 ಹೆಚ್ಚಳ.
*ದೊಡ್ಡ ಕಾರು, ಸಿಮೆಂಟ್ ಮತ್ತಷ್ಟು ದುಬಾರಿ.
*2000 ಜನಸಂಖ್ಯೆ ಇರುವ ಎಲ್ಲ ಹಳ್ಳಿಗಳಿಗೂ ಬ್ಯಾಂಕ್ ಸ್ಥಾಪನೆ.
*ಅಸಂಘಟಿತ ವಲಯ ಜನರ ಸುರಕ್ಷಿತೆಗೆ ಸಂಧ್ಯಾಸುರಕ್ಷಾ ಯೋಜನೆಗೆ 1000 ಕೋಟಿ ರುಪಾಯಿ.
*ಆರೋಗ್ಯ ಇಲಾಖೆಗೆ 22, 300 ಕೋಟಿ ರುಪಾಯಿ.
*10 ಲಕ್ಷ ರುಪಾಯಿ ಗೃಹ ಸಾಲಕ್ಕೆ ಶೇ. 1 ಬಡ್ಡಿ ಸಬ್ಸಿಡಿ.
*ನೂತನ ಪಿಂಚಣಿ ಸೇರುವ ಪ್ರತಿ ಕಾರ್ಮಿಕನಿಗೆ ಖಾತೆ 1000 ಸೇರ್ಪಡೆ.
*ಇಂದಿರಾ ಆವಾಸ್ ಯೋಜನೆಗೆ 1000 ಕೋಟಿ ರುಪಾಯಿ.
*ಅಸಂಘಟಿತ ಕಾರ್ಮಿಕ ಪಿಂಚಣಿ ಮೂರು ವರ್ಷಕ್ಕೆ ವಿಸ್ತರಣೆ.
*ರಾಜೀವ ಆವಾಸ್ ಯೋಜನೆಗೆ 1,270 ಕೋಟಿ ರುಪಾಯಿ.
*ಜವಳಿ ವಲಯದಲ್ಲಿ 30 ಜನರಿಗೆ ಕೌಶಾಲಾಭಿವೃದ್ದಿ ತರಬೇತಿ.
*ರಾಷ್ಟ್ರೀಯ ಗುರುತಿನ ಚೀಟಿ ಯೋಜನೆಗೆ1900 ಕೋಟಿ ರುಪಾಯಿ.
*2010ರಲ್ಲಿ 2000 ಸಿಆರ್ ಪಿಎಫ್ ಯೋಧರ ನೇಮಕ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X