ಹಫೀಜ್ ನನ್ನು ಭಾರತಕ್ಕೆ ಹಸ್ತಾಂತರಿಸಿ, ರಾವ್
ಇಲ್ಲಿನ ಹೈದರಾಬಾದ್ ಭವನದಲ್ಲಿ ಆರಂಭವಾಗಿರುವ ಭಾರತ ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿಗಳ ಮಹತ್ವದ ಮಾತುಕತೆಯಲ್ಲಿ ಭಾರತ ತನ್ನ ಬಹುಮುಖ್ಯ ಬೇಡಿಕೆಯನ್ನು ಮುಂದಿಟ್ಟಿದೆ. ಭಾರತದ ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ಮತ್ತು ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ಸಲ್ಮಾನ್ ಬಶೀರ್ ನಡುವೆ ಮಾತುಕತೆ ಆರಂಭವಾಗಿದ್ದು, ಭಾರತದಲ್ಲಿ ಭಯೋತ್ಪಾದನೆ ಕೃತ್ಯ ನಡೆಸಿ ಪಾಕಿಸ್ತಾನದಲ್ಲಿರುವ ಭಯೋತ್ಪಾದಕರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ನಿರುಪಮಾ ರಾವ್ ಪಾಕಿಸ್ತಾನವನ್ನು ಒತ್ತಾಯಿಸಿದ್ದಾರೆ.
ಆದರೆ, ಪಾಕಿಸ್ತಾನದ ಹಫೀಜ್ ವಿರುದ್ಧ ಕಠಿಣ ಜರುಗಿಸಲು ಪಾಕ್ ಸರಕಾರ ಸಿದ್ಧವಿದೆ. ಆದರೆ, ಆರೋಪಿ ಎದುರು ಸೂಕ್ತ ಸಾಕ್ಷ್ಯಾಧಾರಗಳ ಕೊರತೆ ಇದೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ಸಲ್ಮಾನ್ ಬಶೀರ್, ಹಿರಿಯ ಅಧಿಕಾರಿಗಳಾದ ಅಫ್ರಾಸಿಯಾಬ್, ಶಾಹೀದ್ ಮಲೀಕ್, ಪಾಕ್ ರಾಯಭಾರಿ ಅಬ್ದುಲ್ ಬಸಿತ್ ಸೇರಿದಂತೆ ಐದು ಹಿರಿಯ ಅಧಿಕಾರಗಳ ಮಾತುಕತೆಯಲ್ಲಿ ಭಾಗವಹಿಸಿದೆ.
ಸಂಜೆ ನಿರುಪಮಾ ರಾವ್ ಅವರು ಪಾಕಿಸ್ತಾನದ ನಿಯೋಗ ಭೋಜನಕೂಟ ವ್ಯನಸ್ಥೆ ಮಾಡಿದ್ದಾರೆ. ಸಂಜೆ ಈ ನಿಯೋಗ ಭಾರತದ ರಕ್ಷಣಾ ಸಲಹೆಗಾರ ಶಿವಶಂಕರ್ ಮೆನನ್ ಹಾಗೂ ವಿದೇಶಾಂಗ ಸಚಿವ ಎಸ್ ಎಂ ಕೃಷ್ಣ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ.