ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋ ಭಕ್ಷಣೆ ದುರದೃಷ್ಟಕರ: ಚಿದಾನಂದ ಮೂರ್ತಿ

By Mahesh
|
Google Oneindia Kannada News

M Chidananda Murthy
ಬೆಂಗಳೂರು, ಫೆ. 25: ಈಚೆಗೆ ಬೆಂಗಳೂರು ವಿ.ವಿ.ಯ ದಲಿತ ವರ್ಗದ ಸಂಶೋಧನಾ ವಿದ್ಯಾರ್ಥಿಗಳು ಕುಲಪತಿಗಳ ಕಚೇರಿ ಮುಂದೆ ಗೋಮಾಂಸ ತಿಂದು ಸಂಸ್ಕೃತಿ, ನ್ಯಾಯ, ಶಿಕ್ಷಣಗಳಿಗೆ ತೀವ್ರ ಅಪಚಾರವೆಸಗಿರುವುದನ್ನು ನಾನು ವಿರೋಧಿಸುತ್ತೇನೆ. ಸಂವಿಧಾನದ 48ನೇ ವಿಧಿಯು ಗೋಹತ್ಯಾ ನಿಷೇಧ ಕಾನೂನಿನ ಪರವಾಗಿರುವುದನ್ನು ನಾನೀಗಾಗಲೇ ಸಾರ್ವಜನಿಕರ ಗಮನಕ್ಕೆ ತಂದಿದ್ದೇನೆ. ಬಿಹಾರ, ಉತ್ತರ ಪ್ರದೇಶ, ಮುಂಬಯಿ, ಮಧ್ಯ ಪ್ರದೇಶಗಳು ಗೋಹತ್ಯಾ ನಿಷೇಧ ಕಾನೂನು ಮಾಡಿದಾಗ ಹನ್ನೆರಡು ಮುಸ್ಲಿಮರು ಮಾಂಸದ ವ್ಯಾಪಾರಿಗಳಾಗಿರುವ ತಮಗೆ ಅಂತಹ ಕಾನೂನು ವ್ಯಾಪಾರಕ್ಕೆ ನಷ್ಟವುಂಟು ಮಾಡುತ್ತದೆ

ಬಕ್ರೀದ್ ಹಬ್ಬದ ದಿನ ಗೋಹತ್ಯೆ ಮಾಡು ವುದು ಪ್ರವಾದಿಯನ್ನು ಸ್ಮರಿಸಿಕೊಳ್ಳುವ ಒಂದು ಪುಣ್ಯಕಾರ್ಯವಾಗಿರುವುದರಿಂದ ಆ ಕಾನೂನನ್ನು ರದ್ದುಗೊಳಿಸಬೇಕೆಂದು ಸರ್ವೋಚ್ಛ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದರು. ಆ ಬಗ್ಗೆ ಪ್ರತಿವಾದಗಳನ್ನು ಆಲಿಸಿದ ಸರ್ವೋಚ್ಛ ನ್ಯಾಯಾಲಯದ ಐವರು ನ್ಯಾಯಮೂರ್ತಿ ಗಳಿದ್ದ ಪೂರ್ಣ ಪೀಠವು ಮುಸ್ಲಿಮರ ವಾದವನ್ನು ಪೂರ್ಣವಾಗಿ ತಿರಸ್ಕರಿಸಿ ಗೋಹತ್ಯಾ ನಿಷೇಧ ಕಾನೂನನ್ನು ಎತ್ತಿ ಹಿಡಿದಿದೆ. (1958)"...that a total ban on the slaughter of cows of all ages and calves of cows and calves of she-buffaloes, male and female, is quite reasonable and valid and is in consonance with the directive principles laid down in Article 48".

ಮುಂದೆ ಗುಜರಾತ್ ಸರಕಾರವು ಜಾರಿಗೊಳಿಸಿದ ಕಾನೂನನ್ನು ಎತ್ತಿ ಹಿಡಿದ ಅದೇ ಸರ್ವೋಚ್ಛ ನ್ಯಾಯಾಲಯವು ಗೋವುಗಳ ಜತೆ ಬಸವ (ವೃಷಭ) ಅಥವಾ ಎತ್ತು ಗಳನ್ನು ಸೇರಿಸಿ, ಗೋವುಗಳಂತೆ ಎತ್ತುಗಳನ್ನೂ ಕೊಲ್ಲು ವುದು ಕಾನೂನು ವಿರೋಧ ಎಂದು ಎತ್ತಿ ಹಿಡಿದಿದೆ. ಕರ್ನಾಟಕ ಸರಕಾರವು ಮಾಡಲು ಹೊರಟಿರುವ ಮತಾಂತರ ನಿಷೇಧ ಕಾನೂನು ಮತ್ತು ಗೋಹತ್ಯಾ ನಿಷೇಧ ಕಾನೂನುಗಳನ್ನು ನಾವೆಲ್ಲರೂ ಬೆಂಬಲಿಸುವ ಅಗತ್ಯವಿದೆ.ಈ ಕಾನೂನುಗಳು ಬೇರೆ ರಾಜ್ಯಗಳಲ್ಲಿ ಜಾರಿಗೆ ಬಂದಾಗ ಅಲ್ಲಿದ್ದುದು ಕಾಂಗ್ರೆಸ್ ಸರಕಾರಗಳು ಎಂಬುದನ್ನು ಗಮನಿಸಬೇಕು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X