ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂಸ್ವಾಧೀನ ಪಡಿಸಿಕೊಂಡರೆ ಉಪವಾಸ ಸತ್ಯಾಗ್ರಹ

By Mrutyunjaya Kalmat
|
Google Oneindia Kannada News

Vishveshwara Theertha Swamiji
ಉಡುಪಿ, ಫೆ. 24 : ಮಂಗಳೂರು ವಿಶೇಷ ಆರ್ಥಿಕ ವಲಯದ ಎರಡನೇ ಹಂತದ ಭೂಸ್ವಾಧೀನಕ್ಕೆ ಸರಕಾರ ಹೊರಡಿಸಿರುವ ಅಧಿಸೂಚನೆಯನ್ನು ತಮ್ಮ ಆಗ್ರಹ ನಂತರವೂ ರದ್ದುಗೊಳಿಸದಿದ್ದರೆ ಮಾರ್ಚ್ 6 ರಂದು ಉಪವಾಸ ಕೈಗೊಳ್ಳುವುದಾಗಿ ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿಗಳು ಎಚ್ಚರಿಕೆ ನೀಡಿದ್ದಾರೆ. ಎಸ್ ಇಝಡ್ ವಿರೋಧಿಸಿ ಪೇಜಾವರ ಶ್ರೀಗಳು ಉಪವಾಸ ಸತ್ಯಾಗ್ರಹ ಕೈಗೊಳ್ಳುವ ಪ್ರಮೇಯ ಉದ್ಭವಿಸದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ಈ ಹಿಂದೆ ಮೂರು ಬಾರಿ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಘೋಷಿಸಿ ಮುಂದೂಡಿದ್ದರು. ಇದನ್ನು ಮಾಧ್ಯಮದೆದುರು ಸಮರ್ಥಿಸಿಕೊಳ್ಳಲು ಯತ್ನಿಸಿದ ಶ್ರೀಗಳು, ಉಪವಾಸ ಸತ್ಯಾಗ್ರಹವೆಂದರೆ ಸುಮ್ಮಸುಮ್ಮನೇ ಮಾಡುವುದಲ್ಲ. ಅದು ಬ್ರಹ್ಮಾಸ್ತ್ರ ಇದ್ದ ಹಾಗೇ. ಎದುರಾಳಿಗಳಿಗೆ ಸಾಕಷ್ಟು ಅಕವಾಶ ಕೊಟ್ಟು ಕೊನೆಗೆ ಬಳಸುವ ಅಸ್ತ್ರ. ಇನ್ನೂ ಸರಕಾರ ಬೇಡಿಕೆಗೆ ಮಣಿಯದಿದ್ದರೆ ಮಾರ್ಚ್ 6 ರಂದು ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿಯೇ ತೀರುತ್ತೇವೆ ಎಂದು ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X