ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಗಡೆ ವಿರುದ್ಧ ಗೆಲುವು ಸಾಧಿಸಿದ್ದ ಕದಂ ನಿಧನ

By Rajendra
|
Google Oneindia Kannada News

Ex-deputy speaker Kadam passes away
ಕಾರವಾರ, ಫೆ.20: ಕೆನರಾ ಕ್ಷೇತ್ರದ ಮಾಜಿ ಸಂಸದ ಹಾಗೂ ಮಾಜಿ ಉಪಸಭಾಪತಿ ಬಿ ಪಿ ಕದಂ(93) ಅವರು ಗುರುವಾರ ರಾತ್ರಿ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾದರು. ಕದಂ ಅವರು ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

ಮಾಜಿ ಸಚಿವ ಪ್ರಭಾಕರ ರಾಣೆ, ಮೀನುಗಾರಿಕೆ ಸಚಿವ ಆನಂದ್ ಆಸ್ನೋಟಿಕರ್, ಬಿಜೆಪಿಯ ಎಸ್ ಆರ್ ಪಿಕ್ನೆ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ಪ್ರಸಾದ್ ಕಾರವಾರಕರ್ ಸೇರಿದಂತೆ ಅನೇಕರು ಕದಂ ಅವರಿಗೆ ಅಂತಿಯ ನಮನ ಸಲ್ಲಿಸಿದರು.

ಕೊಲ್ಲಾಪುರದಲ್ಲಿ ಪದವಿ ಮುಗಿಸಿ ವಕೀಲಿ ವೃತ್ತಿ ಪ್ರಾರಂಭಿಸಿದ ಬಾಳ್ಸು ಪುರ್ಸು ಕದಂ, 1952ರಲ್ಲಿ ಎಂಇಎಸ್ ನಿಂದ ಸ್ಪರ್ಧಿಸಿ ಶಾಸಕರಾಗಿದ್ದರು. ಆ ಬಳಿಕ 1962, 1967ರಲ್ಲಿ ಎರಡು ಬಾರಿ ಶಾಸಕರಾಗಿದ್ದರು. 1977ರಲ್ಲಿ ಕೆನರಾ ಕ್ಷೇತ್ರಕ್ಕೆ ನಡೆದ ಲೋಕಸಭೆ ಚುನಾವಣೆಯಲ್ಲಿ ರಾಮಕೃಷ್ಣ ಹೆಗಡೆ ಅವರನ್ನು ಸೋಲಿಸಿ ಕದಂ ಭಾರಿ ಸುದ್ದಿ ಮಾಡಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X