ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಿಜೆಪಿ ಸಂಕಷ್ಟಕ್ಕೆ ನಾಯಕರೇ ಕಾರಣ, ಗಡ್ಕರಿ
ಇಲ್ಲಿ ಆರಂಭವಾಗಿರುವ ರಾಷ್ಟ್ರೀಯ ಕಾರ್ಯಕಾರಣಿಯ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಈ ಹಿರಿಯ ನಾಯಕರು ತಮ್ಮ ಸ್ವಂತದ ರಾಜಕೀಯ ಜೀವನ, ಚಿಂತನೆ ಮುಖ್ಯವೋ ಅಥವಾ ಪಕ್ಷದ ಸಂಘಟನೆ ಮುಖ್ಯವೋ ಎಂಬ ಬಗ್ಗೆ ಚಿಂತನೆ ನಡೆಸಲಿ ಎಂದರು. ಸಂಕೋಚಿತದ ಮನೋಭಾವದ ವ್ಯಕ್ತಿಗಳು ಯಾರೂ ದೊಡ್ಡಮನುಷ್ಯರಾಗುವುದಿಲ್ಲ, ಅನೈತಿಕ ಮನೋಭಾವದಿಂದ ಯಾರೂ ಮೇಲ್ಮಟ್ಟಕ್ಕೆ ಏರಲಾರರು ಎಂಬ ಮಾಜಿ ಪ್ರಧಾನಿ ವಾಜಪೇಯಿ ಅವರ ಹೇಳಿಕೆಯನ್ನು ಉಲ್ಲೇಖಿಸಿದ ಅವರು, ಈ ಹೇಳಿಕೆಯು ಪಕ್ಷದ ನಾಯಕರ ಕಚ್ಚಾಟದ ವಿರುದ್ಧ ಎಚ್ಚರಿಕೆ ಸಂದೇಶ ನೀಡುತ್ತದೆ ಎಂದು ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ ಸತತ 2ನೇ ಬಾರಿ ಸೋಲು ಅನುಭವಿಸಿದ ಪಕ್ಷದ ಪುನರುತ್ಥಾನದ ಅಗತ್ಯವಿದೆ. ಬಿಜೆಪಿ ಇತರೆ ಪಕ್ಷಗಳಿಂತ ಭಿನ್ನವಾಗೇನೂ ಉಳಿದಿಲ್ಲ. ಮುಂದಿನ ದಿನಗಳಲ್ಲಾದರೂ ಪಕ್ಷ ಕಟ್ಟುವ ಕೆಲಸ ಮಾಡಬೇಕಿದೆ ಎಂದು ಗಡ್ಕರಿ ಅಭಿಪ್ರಾಯಪಟ್ಟರು.
Comments
bjp ಬಿಜೆಪಿ lk advani ಎಲ್ ಕೆ ಅಡ್ವಾಣಿ ಲೋಕಸಭೆ ಚುನಾವಣೆ loksabha election ಅಟಲ್ ಬಿಹಾರಿ ವಾಜಪೇಯಿ nitin gadkari ನಿತಿನ್ ಗಡ್ಕರಿ
Story first published: Thursday, February 18, 2010, 10:11 [IST]