ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಗೋಹತ್ಯೆ ನಿಷೇಧಕ್ಕೆ ಸಂಪುಟ ಅಸ್ತು
ಗೃಹ ಸಚಿವ ವಿ ಎಸ್ ಆಚಾರ್ಯ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಗೋಹತ್ಯೆ ಮತ್ತು ಗೋವುಗಳ ಅಕ್ರಮ ಸಾಗಾಣೆ ತಪ್ಪಿಸುವುದು ಸರಕಾರದ ಉದ್ದೇಶ. ವಿಧೇಯಕದ ಮುಖ್ಯಾಂಶಗಳ ಪ್ರಕಾರ ಗೋವು ಸಾಗಾಣೆ ಶಿಕ್ಷಾರ್ಹ. ಆರೋಪಿಗಳಿಗೆ ಒಂದು ವರ್ಷದಿಂದ ಏಳು ವರ್ಷದವರೆಗೆ ಶಿಕ್ಷೆ ವಿಧಿಸಲು ಅವಕಾಶ ಮಾಡಿಕೊಡಲಾಗಿದೆ. ಜತೆಗೆ ಮೊದಲ ಅಪರಾಧಕ್ಕೆ 25ಸಾವಿರ ಗಳಿಂದ 50ಸಾವಿರ ವರೆಗೆ ದಂಡ ವಿಧಿಸಲಾಗುವುದು ಎಂದು ತಿಳಿಸಿದ್ದಾರೆ.
ಕೃಷಿ ಮತ್ತು ಹೈನುಗಾರಿಕೆ ಉದ್ದೇಶಕ್ಕೆ ಗೋವುಗಳನ್ನು ಸಾಗಿಸಲು ಯಾವುದೇ ಅಡ್ಡಿಯಲ್ಲ. ಆದರೆ ಅದಕ್ಕೆ ತಹಸಿಲ್ದಾರ್ ಅಥವಾ ಉಪ ವಿಭಾಗಾಧಿಕಾರಿಯಿಂದ ಅನುಮತಿ ಪಡೆಯಬೇಕು. ವಿಧೇಯಕದಲ್ಲಿ ಗೋ ಹತ್ಯೆ ಕಸಾಯಿ ಖಾನೆಗೆ ಜಾನುವಾರು ಮಾರಾಟ ಮಾಡುವುದನ್ನು ಸಂಪೂರ್ಣ ನಿಷೇದಿಸಲಾಗಿದೆ ಎಂದು ಆಚಾರ್ಯ ಹೇಳಿಕೆ ನೀಡಿದ್ದಾರೆ.
Comments
Story first published: Thursday, February 11, 2010, 11:08 [IST]