ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ದಂಡಾವತಿ ಯೋಜನೆ : ಬಂ, ಗೌಡ ಜುಗಲಬಂಧಿ
ಈ ಯೋಜನೆಯನ್ನು ಜಾರಿಗೊಳಿಸಿಯೇ ಸಿದ್ಧ ಎಂದು ಯಡಿಯೂರಪ್ಪ ಪಟ್ಟು ಹಿಡಿದಿದ್ದರೆ, ಅದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಮಾಜಿ ಸಿಎಂ ಬಂಗಾರಪ್ಪಗೆ ಮಾಜಿ ಪಿಎಂ ದೇವೇಗೌಡರು ಬೆಂಬಲ ಸೂಚಿಸಿದ್ದಾರೆ. ಬಿಜೆಪಿ ಸರಕಾರ ಪ್ರತಿಷ್ಠೆಯಾಗಿ ಪರಿಗಣಿಸಿರುವ ಶಿವಮೂಗ್ಗ ಜಿಲ್ಲೆ ದಂಡಾವತಿ ಯೋಜನೆ ವಿರುದ್ಧ ಹೋರಾಡಲು ದೇವೇಗೌಡರು ಇದೇ 16ರಂದು ಅಧಿಕೃತವಾಗಿ ಕಣಕ್ಕಿಳಿಯಲಿದ್ದಾರೆ.
ಜಿಲ್ಲೆಯ ಸೊರಬಕ್ಕೆ ಕುಡಿಯುವ ನೀರು ಮತ್ತು ಸುತ್ತಮುತ್ತಲಿನ ಪ್ರದೇಶದ ಕೃಷಿ ಭೂಮಿಗೆ ನೀರು ಒದಗಿಸುವ ಈ ಯೋಜನೆಯನ್ನು ಕಾರ್ಯಗತಗೊಳಿಸುವುದು ಅನಿವಾರ್ಯ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಆದರೆ, ನೂರಾರು ಕುಟುಂಬಗಳು ಬೀದಿ ಪಾಲಾಗುವ ಯೋಜನೆಯೇ ಬೇಡ ಎಂದು ಬಂಗಾರಪ್ಪ ಪಟ್ಟು ಹಿಡಿದಿದ್ದಾರೆ. ಈ ಸಂಬಂಧ ಅನೇಕ ವರ್ಷಗಳಿಂದ ಪ್ರತಿಭಟನೆಗಳು ನಡೆಯುತ್ತಿವೆ.
Comments
ದೇವೇಗೌಡ yediyurappa ಯಡಿಯೂರಪ್ಪ ಶಿವಮೊಗ್ಗ deve gowda s bangarappa ಎಸ್ ಬಂಗಾರಪ್ಪ ದಂಡಾವತಿ ಸೊರಬ agriculture ಕೃಷಿ ನೀರಾವರಿ ಯೋಜನೆ sorab
Story first published: Tuesday, February 9, 2010, 12:51 [IST]