ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಡಿತದ ವಿರುದ್ಧ ಮಲೇಷಿಯಾ ಹಿಂದೂಗಳ ಸಮರ

By Mahesh
|
Google Oneindia Kannada News

Malaysian hindu sangam
ಕೌಲಾಲಂಪುರ, ಫೆ. 8: ಕುಡಿತದ ದುಷ್ಪರಿಣಾಮಗಳ ಬಗ್ಗೆ ಯುವ ಜನತೆಗೆ ಸಾರಬೇಕು. ಕುಡಿತವನ್ನು ದೇಶದಿಂದ ನಿರ್ಮೂಲನಾ ಮಾಡಬೇಕು ಎಂದು ಮಲೇಷಿಯಾದ ಹಿಂದೂ ಸಂಘಂ(MHS) ಘೋಷಿಸಿದೆ.

ಬಾಲಕರು ಹಾಗೂ ಮಧ್ಯ ವಯಸ್ಕರು ಇತ್ತೀಚೆಗೆ ಹೆಚ್ಚಾಗಿ ಕುಡಿತದ ಚಟಕ್ಕೆ ಬಲಿಯಾಗುತ್ತಿದ್ದಾರೆ.ಈ ಕೆಟ್ಟ ಚಟದಿಂದ ಬಾಲಕರನ್ನು ಸರಿ ಮಾಡಲು 2 ದಿನಗಳ ಕಾಲ ಸೆರೆಮನೆಗೆ ದೂಡಬೇಕು ಎಂದು ಸಾಮಾಜಿಕ ಪರಿವರ್ತನಾ ಸಮಿತಿಯ ಯುವ ನೇತಾರ ಅರುಣ್ ದೊರೈಸ್ವಾಮಿ ಹೇಳಿದ್ದಾರೆ.

ಮಲೇಷಿಯಾ ಸರ್ಕಾರ ಮದ್ಯದ ಮೇಲೆ ಕಡಿಮೆ ತೆರಿಗೆ ವಿಧಿಸಿ, ಎಲ್ಲರಿಗೂ ಕೈಗೆಟುಕುವಂತೆ ಮಾಡಿದೆ. ಇದು ಬದಲಾಗಬೇಕು. ಮದ್ಯ ವ್ಯಸನಿಗಳ ಪರಿವರ್ತನೆ ಮಾಡಲು ಶಾಶ್ವತವಾದ ಯೋಜನೆ ಅಗತ್ಯವಿದೆ ಎಂದಿದ್ದಾರೆ. ಮುಸ್ಲಿಂ ಸಮುದಾಯ ಪ್ರಾಬಲ್ಯವಿರುವ ಮಲೇಷಿಯಾದಲ್ಲಿ ಹಿಂದೂ ಸಂಘಟನೆ ಧೈರ್ಯವಾಗಿ ಮದ್ಯ ವ್ಯಸನಿಗಳ ವಿರುದ್ಧ ಸಮರ ಸಾರಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X