ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಿಜೆಪಿ ಸರ್ಕಾರಕ್ಕೆ ಹೈಕೋರ್ಟ್ ಛೀಮಾರಿ!
ಚುನಾವಣಾ ವಿವಾದ ಕಳೆದ ಸುಮಾರು ಒಂದು ವಾರದಿಂದ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಮಾಧ್ಯಮಗಳಲ್ಲಿ ನಿರಂತರವಾಗಿ ಸುದ್ದಿ ಪ್ರಕಟವಾಗುತ್ತಿದ್ದರೂ ಚುನಾವಣಾ ಆಯೋಗವಾಗಲಿ, ರಾಜ್ಯ ಸರ್ಕಾರವಾಗಲಿ ಅಥವಾ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಾಗಲಿ ಯಾವುದೇ ಕ್ರಮಕ್ಕೆ ಮುಂದಾಗದೇ ಮೌನ ವಹಿಸಿರುವುದು ಹೈಕೋರ್ಟ್ ಆಕ್ರೋಶಕ್ಕೆ ಗುರಿಯಾಗಿದೆ. ಜ.28 ರ ಸುಪ್ರೀಂಕೋರ್ಟ್ ಆದೇಶವನ್ನು ಲೆಕ್ಕಿಸದೆ ಆಯೋಗವು ಹಠಾತ್ತನೆ ಚುನಾವಣೆ ರದ್ದುಗೊಳಿಸಿರುವುದು ಅಸಂವಿಧಾನಾತ್ಮಕ ಕ್ರಮ ಎಂದು ನ್ಯಾಯವಾದಿ ಎಲ್ ಲಕ್ಷ್ಮೀನಾರಾಯಣ ಅವರು ವಾದಿಸಿದರು.
ಇಂದಿನ ಕಲಾಪದಲ್ಲಿ ಅಡ್ವೋಕೇಟ್ ಜನರಲ್ ಅಶೋಕ್ ಹಾರ್ನಳ್ಳಿ ಅವರ ಗೈರು ಹಾಜರಿ ಕೂಡ ಮತ್ತೊಂದೆಡೆ ಅಸಮಾಧಾನಕ್ಕೆ ಕಾರಣವಾಯಿತು.ಬೆಳಿಗ್ಗೆ 10.30 ಕ್ಕೆ ಆರಂಭವಾದ ವಿಚಾರಣೆ ಮಧ್ಯಾಹ್ನ 12.45 ರವರೆಗೆ ನಡೆಯಿತು. ನ್ಯಾಯಾಲಯದ ಕೊಠಡಿ ಜನರಿಂದ ತುಂಬಿ ಹೋಗಿತ್ತು. ಮುಂದಿನ ವಿಚಾರಣೆ ಸೋಮವಾರ ಬೆಳಿಗ್ಗೆ 10. 30 ಕ್ಕೆ ಆರಂಭವಾಗಲಿದೆ.
ಬೆಂಗಳೂರು ಚುನಾವಣಾ ಆಯೋಗ bangalore ಬಿಬಿಎಂಪಿ high court ಹೈಕೋರ್ಟ್ ಚುನಾವಣೆ ಮತದಾರರು state election commission bbmp polls ಬಿಜೆಪಿ ಸರ್ಕಾರ bjp government
Story first published: Friday, February 5, 2010, 17:35 [IST]