ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಸಬ್ ನನ್ನು ಹೊಗಳಿದ ಪೋಲೀಸ್ ವರ್ಗಾವಣೆ

By Mahesh
|
Google Oneindia Kannada News

IG Rajendra Kumar , MP
ಭೋಪಾಲ್, ಫೆ 4 : ಮುಂಬೈ ದಾಳಿ ರೂವಾರಿ ಉಗ್ರ ಅಜ್ಮಲ್ ಅಮೀರ್ ಕಸಬ್ ನನ್ನು ಹೊಗಳಿದ ವಿಶೇಷ ಶಸ್ತ್ರ ಸಜ್ಜಿತ ಕಾರ್ಯಪಡೆಯ (ಎಸ್ ಎ ಎಫ್) ಮಹಾ ನಿರ್ದೇಶಕರನ್ನು ಮಧ್ಯಪ್ರದೇಶ ಸರಕಾರ ಎತ್ತಂಗಡಿ ಮಾಡಿದೆ. ತಾವು ಮಾಡಿದ ತಪ್ಪಿಗಾಗಿ ಐಜಿ ರಾಜೇಂದ್ರ ಕುಮಾರ್ ಇಂತಹ ಬೆಲೆ ತತ್ತಿದ್ದಾರೆ.ಎಸ್ ಎ ಎಫ್ ತರಬೇತಿ ಶಿಬಿರದಲ್ಲಿ ರಾಜೇಂದ್ರ ಕುಮಾರ್ ಉಗ್ರ ಕಸಬ್ ನನ್ನು ಹಾಡಿ ಹೊಗಳಿದ್ದರು.

ವಿಡಿಯೋ: ಕಸಬ್ ಗೆ ತಿಳಿಯದ ಆಯುಧಗಳಿಲ್ಲ

ಉತ್ತಮ ತರಬೇತಿ ನೀವು ಹೊಂದಿದ್ದರೆ ಏನು ಬೇಕಾದರೂ ಸಾಧಿಸಬಹುದು. ಇದಕ್ಕೆ ಉಗ್ರ ಕಸಬ್ ಒಳ್ಳೆ ಉದಾಹರಣೆ. 8ನೇ ತರಗತಿ ಓದಿದ್ದ ಕಸಬ್ ಕೇವಲ ಒಂದು ವರ್ಷದ ಅವಧಿಯಲ್ಲಿ ಉತ್ತಮ ತರಬೇತಿ ಹೊಂದಿದ್ದ. ಈ ಒಂದು ವರ್ಷದ ಅವಧಿಯಲ್ಲಿ ಆತ ಶಸ್ತ್ರಾಸ್ತ್ರ, ಯಂತ್ರೋಪಕರಣ, ಜಿಪಿಎಸ್ ವ್ಯವಸ್ಥೆ ಬಳಸುವಸ್ಟು ನಿಸ್ಸೀಮನಾಗಿದ್ದ. ಅವನ ಕಾರ್ಯೋತ್ಸಾಹದಿಂದ ಇದು ಅವನಿಗೆ ಸಾಧ್ಯವಾಯಿತು ಎಂದು ಶಿಬಿರದಲ್ಲಿ ಹೇಳಿದ್ದರು. ಐಜಿ ಹೇಳಿಕೆ ಕುರಿತು ಅರಿತ ಮಧ್ಯಪ್ರದೇಶ ಸರಕಾರ ಅವರನ್ನು ತಕ್ಷಣದಿಂದಲೇ ಪೋಲೀಸ್ ಮುಖ್ಯ ಕಚೇರಿಗೆ ವರ್ಗಾವಣೆ ಮಾಡಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X