ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಆರೆಸ್ಸೆಸ್ ಗೆ ಮುಂಬೈ ಚಿಂತೆ ಯಾಕೆ?: ಶಿವಸೇನೆ
ಪಕ್ಷದ ಮುಖವಾಣಿ 'ಸಾಮ್ನಾ' ದಲ್ಲಿ ಆರ್ಎಸ್ಎಸ್ ವಿರುದ್ದ ಹರಿಹಾಯ್ದಿರುವ ಸೇನೆ, 1992ರ ಹಿಂಸಾಚಾರದಲ್ಲಿ ಹಿಂದೂಗಳನ್ನು ರಕ್ಷಿಸಿದ್ದು ಶಿವಸೇನೆ ಹೊರತು ಆರ್ಎಸ್ಎಸ್ ಅಲ್ಲ. ನಿಮ್ಮ ವ್ಯಾಪ್ತಿ ಮೀರಿ ಹೇಳಿಕೆ ನೀಡಬೇಡಿ. ಮುಂಬೈ ವಿಚಾರದಲ್ಲಿ ಆರ್ಎಸ್ಎಸ್ ಯಾವುದೇ ಹೇಳಿಕೆ ನೀಡಬಾರದು. ಮುಂಬೈ ಮಹಾರಾಷ್ಟ್ರ ಮತ್ತು ಮರಾಠಿಗರಿಗೆ ಸೇರಿದ್ದು. ದಕ್ಷಿಣಭಾರತಕ್ಕೆ ಹೋಗಿ ಹಿಂದಿ ಉದ್ದಾರ ಮಾಡುವ ಕೆಲಸ ಮಾಡಿ ಎಂದು ಉದ್ಭವ್ ಠಾಕ್ರೆ ತಮ್ಮ ಪಕ್ಷದ ಮುಖವಾಣಿಯಲ್ಲಿ ಹೇಳಿಕೆ ನೀಡಿದ್ದಾರೆ. ಬಿಜೆಪಿ, ಆರ್ಎಸ್ಎಸ್ ವಿರುದ್ದ ಹೇಳಿಕೆ ನೀಡಿರುವ ಶಿವಸೇನೆಯ ವರ್ತನೆಯ ಬಗ್ಗೆ ಬೇಸರ ವ್ಯಕ್ತ ಪಡಿಸಿದೆ.
ಮುಂಬೈ ಎಲ್ಲಾ ಭಾರತೀಯರಿಗೆ ಸೇರಿದ್ದು, ನಾವೆಲ್ಲಾ ಭಾರತೀಯರು. ರಾಜಕೀಯಕ್ಕಾಗಿ ದೇಶ ವಿಭಜನೆಯ ಕೆಲಸ ಬೇಡ. ಯಾವುದೇ ಭಾರತೀಯ ಭಾರತದ ಯಾವುದೇ ಭಾಗದಲ್ಲಿ ಸಂಪಾದಿಸಿ ಜೀವನ ನಡೆಸ ಬಹುದು. ಉತ್ತರ ಭಾರತೀಯರನ್ನು ಮುಂಬೈನಲ್ಲಿ ರಕ್ಷಿಸ ಬೇಕಾಗಿದೆ ಎಂದು ಆರ್ಎಸ್ಎಸ್ ಮುಖಂಡ ಮೋಹನ್ ಭಾಗವತ್ ಹೇಳಿಕೆ ನೀಡಿದ್ದರು.
Comments
ಉದ್ಧವ್ ಠಾಕ್ರೆ mns marathi ಮಹಾರಾಷ್ಟ್ರ rss ಮರಾಠಿ ಉತ್ತರ ಭಾರತ mohan bhagwat ಮೋಹನ್ ಭಾಗವತ್ ಅರೆಸ್ಸೆಸ್ ಎಂಎನ್ಎಸ್ uddhav thackrey
Story first published: Monday, February 1, 2010, 17:07 [IST]