ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಜುಟ್ಟು ಈಶ್ವರಪ್ಪ ಕೈಗೆ ಸಿಕ್ರೆ ಅಧೋಗತಿ

By Mahesh
|
Google Oneindia Kannada News

Siddaramaiah
ಮಂಗಳೂರು, ಜ.23: ಇನ್ನೇನು ಇಂಧನ ಸಚಿವ ಖಾತೆಗೆ ರಾಜೀನಾಮೆ ನೀಡಿ ಜ.30 ರ ಚುನಾವಣೆ ಎದುರಿಸಿ, ಕರ್ನಾಟಕ ರಾಜ್ಯದ ಬಿಜೆಪಿ ಘಟಕದ ರಾಜ್ಯಾಧ್ಯಕ್ಷ ಸ್ಥಾನಕ್ಕೇರುವ ಕನಸು ಕಾಣುತ್ತಿರುವ ಈಶ್ವರಪ್ಪ ಅವರಿಗೆ ಸಿದ್ದರಾಮಯ್ಯ ಮಾತಿನ ಗೂಸಾ ನೀಡಿದ್ದಾರೆ.

ಬಿಜೆಪಿಯ ಜುಟ್ಟ್ಟು ಜನಿವಾರ ಈಶ್ವರಪ್ಪ ಅವರ ಕೈಗೆ ಸಿಕ್ಕ ಮೇಲೆ, ಬಿಜೆಪಿ ಸರ್ಕಾರ ಪತನ ಶತಃಸಿದ್ಧ.ರಾಜ್ಯವನ್ನು ಕತ್ತಲೆಗೆ ದೂಡಿದ ಅತ್ಯಂತ ಭ್ರಷ್ಟ ಇಂಧನ ಇಲಾಖೆಯ ಸಚಿವರಾದ ಕೀರ್ತಿ ಈಶ್ವರಪ್ಪ ಅವರಿಗೆ ಸಲ್ಲುತ್ತದೆ. ಬಿಜೆಪಿಯ ಭ್ರಷ್ಟತನದ ಫಲವನ್ನು ಬಿಬಿಎಂಪಿ ಚುನಾವಣೆಯಲ್ಲಿ ಸೋಲುವುದರ ಮೂಲಕ ಕಾಣಲಿದೆ. ಸರ್ಕಾರ ಪತನಕ್ಕೆ ಇದು ನಾಂದಿ ಹಾಡಲಿದೆ ಎಂದು ಸಿದ್ದು ಲೇವಡಿ ಮಾಡಿದರು.

ನೈಸ್ ಬಗ್ಗೆ ನೈಸ್ ಮಾತು: ಬಿಎಂಐಸಿ ನೈಸ್ ಯೋಜನೆಗೆ ಕಾಂಗ್ರೆಸ್ ಪಕ್ಷ ವಿರೋಧಿ ಅಲ್ಲ,. ಆದರೆ, ಭೂ ಕಬಳಿಕೆ ಮಾಡಿ ರೈತರಿಗೆ ಕಷ್ಟ ಕೊಟ್ಟರೆ ಸಹಿಸಲು ಸಾಧ್ಯವಿಲ್ಲ. ರೆಡ್ಡಿ ಸೋದರರ ಅಕ್ರಮ ವ್ಯವಹಾರಗಳಿಗೆ ಸಹಕಾರ ನೀಡಿದ್ದು ಬಿಜೆಪಿ ಸರ್ಕಾರದ ಸಾಧನೆ. ಯಡಿಯೂರಪ್ಪ ಅಸಮರ್ಥ ಸಿಎಂ. ರೈತರ ಸಂಕಷ್ಟಗಳಿಗೆ ಪರಿಹಾರ ನೀಡಲಾಗದ ಸರ್ಕಾರ ಇದ್ದರೇನೂ ಪ್ರಯೋಜನ ಎಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರಿಗೆ ಸಿದ್ದು ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X