ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಶಿವಳ್ಳಿ ಬ್ರಾಹ್ಮಣರ ವಶಕ್ಕೆ ಅಂಬಲಪಾಡಿ ದೇವಾಲಯ
ವಂಶಪಾರಂಪರಿಕ ಸಂಬಂಧದ ಹಿನ್ನಲೆಯಲ್ಲಿ ದೇವಾಲಯವನ್ನು ಶಿವಳ್ಳಿ ಬ್ರಾಹ್ಮಣರ ವಶಕ್ಕೆ ನೀಡಲು ಸರಕಾರ ತಯಾರಿ ನಡೆಸಿದೆ. ಈ ದೇವಾಲಯಕ್ಕೆ ವಾರ್ಷಿಕ ಸುಮಾರು ಎರಡು ಕೋಟಿ ಆದಾಯ ಹೊಂದಿದ್ದು 3.5 ಎಕರೆ ಜಮೀನು ಒಡೆತನವನ್ನು ಹೊಂದಿದೆ. ಆದರೆ, ಕೆಲವು ತಿಂಗಳ ಹಿಂದೆ ಖಾತೆಯ ಹಿಂದಿನ ಕಾರ್ಯದರ್ಶಿಯವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ದೇವಾಲಯವನ್ನು ಖಾತೆಯ ವ್ಯಾಪ್ತಿಯಿಂದ ಹೊರಗಿಡುವ ನಿರ್ಧಾರ ತೆಗೆದು ಕೊಳ್ಳಬಾರದೆಂದು ಪತ್ರ ವ್ಯವಹಾರ ನಡೆಸಿದ್ದರೆನ್ನಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಜರಾಯಿ ಸಚಿವ ವಿ ಎಸ್ ಆಚಾರ್ಯ, ದೇವಾಲಯ ಹಸ್ತಾಂತರ ಮಾಡುವಂತೆ ಶಿವಳ್ಳಿ ಬ್ರಾಹ್ಮಣರು ಸಲ್ಲಿಸಿರುವ ಮನವಿ ಸರಕಾರದ ಮುಂದೆ ಇದೆ. ಬೇರೆ ಬೇರೆ ಸಮುದಾಯದ ಜನರು ದೇವಾಲಯವನ್ನು ನಿರ್ವಹಣೆ ಮಾಡಿದ ನಿದರ್ಶನಗಳಿವೆ. ಅಡ್ವೋಕೇಟ್ ಜನರಲ್ ಅಶೋಕ್ ಹಾರನಹಳ್ಳಿ ಅವರ ಸಲಹೆ ಪಡೆದು ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಉತ್ತರಿಸಿದ್ದಾರೆ.
Comments
Story first published: Thursday, January 21, 2010, 11:31 [IST]