ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ದ್ವೇಷ ಬಿತ್ತುವ ಚಿಮೂ, ಭೈರಪ್ಪ : ಮರುಳುಸಿದ್ಧಪ್ಪ
ಅಂಕಿತ ಪ್ರಕಾಶನ ಪ್ರಕಟಿಸಿದ ಬರಗೂರು ರಾಮಚಂದ್ರಪ್ಪ ಅವರ ಲೇಖನಗಳ ಸಂಗ್ರಹ 'ಮರ್ಯಾದಸ್ಥ ಮನುಷ್ಯರಾಗೋಣ' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭೈರಪ್ಪ ಮತ್ತು ಚಿಮೂ ಅವರನ್ನು ಎಲ್ಲರೂ ತರಾಟೆಗೆ ತೆಗೆದುಕೊಂಡರು. ಭೈರಪ್ಪ ಸಾಮಾನ್ಯರಲ್ಲ. ಅಸಾಮಾನ್ಯ ಪ್ರತಿಭಾವಂತರು ಎಂದು ಕೊಂಡಾಡಿದ್ದು ಕೂಡ ಇದೇ ವೇದಿಕೆಯಲ್ಲೇ.
ಇಡೀ ಸಮುದಾಯವನ್ನು ದ್ವೇಷ, ಅಸಹನೆಗೆ ತಳ್ಳುವ ಚಿಂತನೆ ಅವರಲ್ಲೇಕಿದೆ ಎಂಬುದು ನಿಗೂಢ ರಹಸ್ಯ. ವೈಯಕ್ತಿಕ ಆಸೆ, ಕೀರ್ತಿಯ ಹಂಬಲ ಯಾವುದೂ ಇಲ್ಲದ ಚಿಮೂ ಅವರಿಗೆ 15 ದಿನಕ್ಕೊಮ್ಮೆ ಸ್ಕ್ರಿಜೋಫ್ರೇನಿಯಾಯಂದಹ ರೋಗ ಬಡಿದು ಬಿಡುತ್ತದೆ. ಕ್ರೈಸ್ತರು ಮತಾಂತರ ಮಾಡುತ್ತಾರೆ ಎಂದು ಬೊಬ್ಬೆ ಇಡುತ್ತಾರೆ. ಗೃಹ ಭಂಗ, ಪರ್ವದಂತಹ ಅಮೂಲ್ಯ ಕೃತಿಗಳನ್ನು ಕೊಟ್ಟ ಭೈರಪ್ಪ ಆವರಣ ಸುಳ್ಳಿನ ಕಂತೆ. ಕುತರ್ಕಗಳ ಒಣಪಾಂಡಿತ್ಯದ ಕೃತಿ. ಸನ್ನಿ ಅಥವಾ ಹುಚ್ಚು ಹಿಡಿದು ಮನುಷ್ಯರಿಗೆ ವಿವೇಕ, ತರತಮ ಜ್ಞಾನ ಇರುವುದಿಲ್ಲ ಎಂದು ನಾಟಕಕಾರ ಮರುಳಸಿದ್ಧಪ್ಪ ಟೀಕಿಸಿದರು.
Story first published: Monday, January 18, 2010, 10:59 [IST]