ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದ 10 ವಿಜ್ಞಾನಿಗಳಿಗೆ ಉಗ್ರರಿಂದ ಭಯ

By Staff
|
Google Oneindia Kannada News

IISc attack terrorists
ನವದೆಹಲಿ, ಜ. 11 : ಪಾಕಿಸ್ತಾನಿ ಮೂಲದ ಲಷ್ಕರ್ ಇ ತೊಯ್ಬಾದಿಂದ ದೇಶದ ಪ್ರಮುಖ 10 ವಿಜ್ಞಾನಿಗಳಿಗೆ ಬೆದರಿಕೆ ವ್ಯಕ್ತವಾಗಿದ್ದು, ಅವರೆಲ್ಲರ ಭದ್ರತಾ ವ್ಯವಸ್ಥೆ ಮತ್ತಷ್ಟು ಬಿಗಿಗೊಳಿಸಲಾಗಿದೆ.

ಪರಮಾಣು, ರಕ್ಷಣೆ ಹಾಗೂ ಬಾಹ್ಯಾಕಾಶ ಕ್ಷೇತ್ರದಲ್ಲಿನ ವಿಜ್ಞಾನಿಗಳಿಗೆ ಉಗ್ರರಿಂದ ಬೆದರಿಕೆ ವ್ಯಕ್ತಗೊಂಡಿದೆ. ಮಸ್ಕತ್ ನಿಂದ ಗಡೀಪಾರುಗೊಂಡಿರುವ ಸರ್ಫರಾಜ್ ನವಾಜ್ ಹತ್ಯೆ ಬೆದರಿಕೆ ಎದುರಿಸುತ್ತಿರುವ ವಿಜ್ಞಾನಿಗಳ ಹೆಸರು ಬಹಿರಂಗಪಡಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಗಾಗಿ ಕ್ರಮವಾಗಿ ವಿಜ್ಞಾನಿಗಳಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಇತ್ತೀಚೆಗೆ ಭಾರತ ಬಾಂಗ್ಲಾದೇಶದಲ್ಲಿ ಸೆರೆಸಿಕ್ಕ ಟಿ ನಜೀರ್ ಕೂಡ ಇದನ್ನು ಸ್ಪಷ್ಟಪಡಿಸಿದ್ದಾನೆ.

ಬೆಂಗಳೂರು ಸ್ಫೋಟದಲ್ಲಿ ಈ ಇಬ್ಬರು ಉಗ್ರರೂ ಭಾಗಿಗಳಾಗಿದ್ದರು. 2008ರ ಬೆಂಗಳೂರು ಸ್ಫೋಟದಲ್ಲಿ ನೇರವಾಗಿ ಪಾಲ್ಗೊಂಡಿದ್ದ ನಜೀರ್ ಇತರ ಸ್ಫೋಟಗಳಿಗೆ ಸುಧಾರಿತ ಸಾಧನಗಳನ್ನು ಇಂಡಿಯನ್ ಮುಜಾಹೀದಿನ್ ಪೂರೈಸಿದ ಅಪಾದನೆ ಎದುರಿಸುತ್ತಿದ್ದಾನೆ. ಈ ಹಿನ್ನೆಲೆಯಲ್ಲಿ ಮುಂಬೈ ಕೇಂದ್ರ ಹಾಗೂ ಬಾಬಾ ಬಾಲಿವುಡ್ ಸ್ಟುಡಿಯೋಗೆ ಹೆಚ್ಚಿನ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ಕರಾವಳಿಯಲ್ಲೂ ಭದ್ರತೆ ಬಲಪಡಿಸಲಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X