ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ದೇಶದ 10 ವಿಜ್ಞಾನಿಗಳಿಗೆ ಉಗ್ರರಿಂದ ಭಯ
ಪರಮಾಣು, ರಕ್ಷಣೆ ಹಾಗೂ ಬಾಹ್ಯಾಕಾಶ ಕ್ಷೇತ್ರದಲ್ಲಿನ ವಿಜ್ಞಾನಿಗಳಿಗೆ ಉಗ್ರರಿಂದ ಬೆದರಿಕೆ ವ್ಯಕ್ತಗೊಂಡಿದೆ. ಮಸ್ಕತ್ ನಿಂದ ಗಡೀಪಾರುಗೊಂಡಿರುವ ಸರ್ಫರಾಜ್ ನವಾಜ್ ಹತ್ಯೆ ಬೆದರಿಕೆ ಎದುರಿಸುತ್ತಿರುವ ವಿಜ್ಞಾನಿಗಳ ಹೆಸರು ಬಹಿರಂಗಪಡಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಗಾಗಿ ಕ್ರಮವಾಗಿ ವಿಜ್ಞಾನಿಗಳಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಇತ್ತೀಚೆಗೆ ಭಾರತ ಬಾಂಗ್ಲಾದೇಶದಲ್ಲಿ ಸೆರೆಸಿಕ್ಕ ಟಿ ನಜೀರ್ ಕೂಡ ಇದನ್ನು ಸ್ಪಷ್ಟಪಡಿಸಿದ್ದಾನೆ.
ಬೆಂಗಳೂರು ಸ್ಫೋಟದಲ್ಲಿ ಈ ಇಬ್ಬರು ಉಗ್ರರೂ ಭಾಗಿಗಳಾಗಿದ್ದರು. 2008ರ ಬೆಂಗಳೂರು ಸ್ಫೋಟದಲ್ಲಿ ನೇರವಾಗಿ ಪಾಲ್ಗೊಂಡಿದ್ದ ನಜೀರ್ ಇತರ ಸ್ಫೋಟಗಳಿಗೆ ಸುಧಾರಿತ ಸಾಧನಗಳನ್ನು ಇಂಡಿಯನ್ ಮುಜಾಹೀದಿನ್ ಪೂರೈಸಿದ ಅಪಾದನೆ ಎದುರಿಸುತ್ತಿದ್ದಾನೆ. ಈ ಹಿನ್ನೆಲೆಯಲ್ಲಿ ಮುಂಬೈ ಕೇಂದ್ರ ಹಾಗೂ ಬಾಬಾ ಬಾಲಿವುಡ್ ಸ್ಟುಡಿಯೋಗೆ ಹೆಚ್ಚಿನ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ಕರಾವಳಿಯಲ್ಲೂ ಭದ್ರತೆ ಬಲಪಡಿಸಲಾಗಿದೆ.
Comments
pakistan ಪಾಕಿಸ್ತಾನ terrorists ಲಷ್ಕರ್ ಇ ತೊಯ್ಬಾ bangalore blast ವಿಜ್ಞಾನಿಗಳು scientists ಬೆಂಗಳೂರು ಸ್ಫೋಟ laskhar e taiba
Story first published: Monday, January 11, 2010, 14:04 [IST]