ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಹಠ ಹಿಡಿದರೆ ಕಠಿಣ ಕ್ರಮ, ಹಾಕಿ ಇಂಡಿಯಾ
ವಿಡಿಯೋ:ವೇತನ ವಿಳಂಬ, ಹಾಕಿ ಆಟಗಾರರ ಪ್ರತಿಭಟನೆ
ಮುಂದಿನ ತಿಂಗಳು ನವದೆಹಲಿಯಲ್ಲಿ ಹಾಕಿ ವಿಶ್ವಕಪ್ ನಡೆಯಬೇಕಿದೆ. ಅದರ ಪೂರ್ವ ತಯಾರಿಗಾಗಿ ಪುಣೆಯಲ್ಲಿ ಅಭ್ಯಾಸ ಪಂದ್ಯಗಳನ್ನು ಏರ್ಪಡಿಸಲಾಗಿದೆ. ಸಂಬಳ ನೀಡಿಲ್ಲ ಎನ್ನುವು ಕಾರಣಕ್ಕೆ ಅಭ್ಯಾಸ ಪಂದ್ಯವನ್ನು ಬಹಿಷ್ಕರಿಸುವುದು ಏಷ್ಟು ಸರಿ ? ಸಮಸ್ಯೆಗಳಿದ್ದರೆ ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು. ಅದನ್ನು ಬಿಟ್ಟು ಪಂದ್ಯ ಬಹಿಷ್ಕರಿಸಿದರೆ ಹೇಗೆ ಎಂದು ಹಾಕಿ ಇಂಡಿಯಾದ ಅಧ್ಯಕ್ಷ ಎ ಕೆ ಮಟ್ಟೂ ಎಚ್ಚರಿಕೆ ನೀಡಿದ್ದಾರೆ.
ಆಟಗಾರರಿಗೆ ಸಂಬಳಕ್ಕೆ ಸಂಬಂಧಿಸಿದಂತೆ ಹಾಕಿ ಇಂಡಿಯಾ ಅಧಿಕಾರಿಗಳು ಮಾತುಕತೆ ನಡೆಸಿದ್ದಾರೆ. ಆದರೂ ಆಟಗಾರರು ಹಠಹಿಡಿದಿದ್ದಾರೆ. ಇದೇ ಪರಿಸ್ಥಿತಿ ಮುಂದುವರೆದರೆ ಆಟಗಾರರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಮಟ್ಟೂ ಹೇಳಿದ್ದಾರೆ.
Comments
Story first published: Monday, January 11, 2010, 17:34 [IST]