ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಿಬಿಎಂಪಿ ಚುನಾವಣೆ, ಕೈ-ಜೆಡಿಎಸ್ ಮೈತ್ರಿ
ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಬಿಎಂಪಿ ಚುನಾವಣೆಗೆ ಪಕ್ಷ ಸಂಪೂರ್ಣ ಸಿದ್ಧವಾಗಿದೆ ಎಂದರು. ರಾಜ್ಯದಲ್ಲಿ ಆಡಳಿತದಲ್ಲಿರುವ ಸರಕಾರ ಅತ್ಯಂತ ಅನಾಗರಿಕ ಸರಕಾರವಾಗಿದೆ. ಎಂದೂ ಕಂಡು ಕೇಳಿರಿಯದ ರೀತಿಯಲ್ಲಿ ರೈತರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಹಕ್ಕಿಗಾಗಿ ಪ್ರತಿಭಟನೆ ನಡೆಸುವ ರೈತನನ್ನು ಜೈಲಿಗೆ ಹಾಕುವುದಲ್ಲದೆ, ಅವರ ಕೈಗ ಕೊಳ ತೊಡಿಸುವುದು ಹೀನ ಕೃತ್ಯ ಎಂದು ದೇವೇಗೌಡ ಖಂಡಿಸಿದರು.
ನೈಸ್ ವಿರುದ್ಧ ವಿವಿಧ ಬೇಡಿಕೆಗಳಿಗೆ ಸಂಬಂಧಿಸಿದಂತೆ ಕೆಂಗೇರಿ ಬಳಿ ಹೋರಾಟ ನಡೆಸುತ್ತಿರುವ ರೈತರಿಗೆ ಬೆಂಬಲ ಸೂಚಿಸಿದ ಗೌಡರು, ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ನ್ಯಾಯ ಸಿಗುವವವರೆಗೂ ಹೋರಾಟ ನಡೆಸುತ್ತೇನೆ. ಶನಿವಾರದಿಂದ ತಾವು ಕೂಡಾ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ರೈತರು ಶಾಂತ ರೀತಿಯಿಂದ ಪ್ರತಿಭಟನೆ ನಡೆಸಬೇಕು ಎಂದು ಅವರು ಮನವಿ ಮಾಡಿಕೊಂಡರು.
Comments
ನೈಸ್ ದೇವೇಗೌಡ nice deve gowda bmic ಪ್ರತಿಭಟನೆ protest ಎಚ್ ಡಿ ಕುಮಾರಸ್ವಾಮಿ hd kumaraswamy ಬಿಬಿಎಂಪಿ ರೈತ farmer ಚುನಾವಣೆ bbmp polls
Story first published: Thursday, January 7, 2010, 17:03 [IST]