ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಣರಾಜ್ಯೋತ್ಸವ ಪರೇಡಿಗೆ ಸಾಗರದ ಡೊಳ್ಳುತಂಡ

By Staff
|
Google Oneindia Kannada News

Kanneshwara Folk artists, Sagar
ಶಿವಮೊಗ್ಗ, ಜ. 4 : ನವದೆಹಲಿಯಲ್ಲಿ ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ರಾಜ್ಯದ ಪರವಾಗಿ ರಾಜ್ಯ ವಾರ್ತಾ ಇಲಾಖೆಯು ಪಟ್ಟದಕಲ್ಲು ವಾಸ್ತುಶಿಲ್ಪ ವೈಭವವನ್ನು ಪ್ರತಿಬಿಂಬಿಸುವ ಸ್ಥಬ್ದಚಿತ್ರವನ್ನು ಪ್ರದರ್ಶಿಸಲಿದೆ.

ಈ ಸ್ಥಬ್ದ ಚಿತ್ರಕ್ಕೆ ಇನ್ನಷ್ಟು ಮೆರಗನ್ನು ಕಲ್ಪಿಸಿಕೊಡಲು ಸಾಗರ ತಾಲ್ಲೂಕಿನ ಕಣ್ಣೂರು ಗ್ರಾಮದ ಕಣ್ಣೇಶ್ವರ ಜಾನಪದ ಕಲಾ ಸಂಘದ ಕಲಾವಿದರು ಡೊಳ್ಳು ಪ್ರದರ್ಶನ ನೀಡಲು ಆಯ್ಕೆಯಾಗಿದ್ದಾರೆ. ಕಣ್ಣೂರು ಗ್ರಾಮದ 14 ಕಲಾವಿದರು ಗೌತಮಪುರ ಗ್ರಾಮದ ಬೆಳ್ಳಿಯಪ್ಪ ತಂಡದ 11 ಕಲಾವಿದರು ಸೇರಿದಂತೆ ಒಟ್ಟು 25 ಜನ ಕಲಾವಿದರ ತಂಡ ಬಿ.ಟಾಕಪ್ಪ ಕಣ್ಣೂರು ಅವರ ನೇತ್ರತ್ವದಲ್ಲಿ ದೆಹಲಿಗೆ ತೆರಳಿ ಪ್ರದರ್ಶನ ನೀಡಲು ಸಜ್ಜಾಗಿದೆ.

ತಂಡದಲ್ಲಿನ ಬಹುತೇಕ ಕಲಾವಿದರು ಈಗಾಗಲೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಅಲ್ಲದೆ, ರಷ್ಯಾ, ಅಮೇರಿಕ, ಇಂಗ್ಲೆಂಡ್, ದುಬೈ ಮುಂತಾದ ಹೊರ ರಾಷ್ಟ್ರಗಳಲ್ಲಿ ಪ್ರದರ್ಶನ ನೀಡಿ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ ಎಂದು ತಂಡದ ಮುಖಂಡ ಟಾಕಪ್ಪ ತಿಳಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X