ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಹಂಪಿಯಲ್ಲಿ ಬಿಜೆಪಿ ಸಚಿವ ಸಂಪುಟ ಸಭೆ?
ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ನಡೆದ ಶ್ರೀಕೃಷ್ಣ ದೇವರಾಯರ ಪಟ್ಟಾಭೀಷೇಕದ 500ನೇ ವರ್ಷಾಚರಣೆ ಮಹೋತ್ಸವದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಜ.16 ಅಥವಾ 17ರಂದು ಸಭೆ ನಡೆಸುವ ಯೋಚನೆ ಇದೆ. ಶೀಘ್ರವೇ ದಿನಾಂಕವನ್ನು ಅಂತಿಮಗೊಳಿಸಲಾಗುವುದು ಎಂದರು. ಕೃಷ್ಣ ದೇವರಾಯರ ವರ್ಷಾಚರಣೆಗೆ 30 ಕೋಟಿ ರುಪಾಯಿಗಳ ಅನುದಾನಕ್ಕೆ ಸರಕಾರ ಅನುಮೋದನೆ ನೀಡಿದೆ.
ಜ.27 ರಿಂದ 29ರವರೆಗೆ ನಡೆಯುವ ಮೂರು ದಿನಗಳ ಕಾರ್ಯಕ್ರಮಕ್ಕೆ 15 ಕೋಟಿ ರುಪಾಯಿ, ಪ್ರಚಾರಕ್ಕಾಗಿ, 3 ಕೋಟಿ ರುಪಾಯಿ ವೆಚ್ಚ ಮಾಡಲಾಗುವುದು. ಖ್ಯಾತ ಚಲನಚಿತ್ರ ನಟರು, ದೇಶ ವಿದೇಶಗಳಿಂದ ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಮಹೋತ್ಸವ ಕಾರ್ಯಕ್ರಮಗಳಿಗೆ 8 ವೇದಿಕೆಗಳನ್ನು ನಿರ್ಮಿಸಲಾಗಿದೆ. ಪ್ರಧಾನ ವೇದಿಕೆಯನ್ನು ಬಸವಣ್ಣ ಮಂಟಪದ ಬದಲು ಗಾಯತ್ರಿ ಪೀಠದ ಬಳಿಯಲ್ಲಿರುವ ಬಯಲಿನಲ್ಲಿ ನಿರ್ಮಿಸಲಾಗಿದೆ ಎಂದು ರೆಡ್ಡಿ ಹೇಳಿದರು.
Comments
yediyurappa ಜನಾರ್ದನ ರೆಡ್ಡಿ hampi janardhana reddy ಸಂಪುಟ ಸಭೆ cabinet meet ಹಂಪಿ ವರ್ಷಾಚರಣೆ ಪಟ್ಟಾಭಿಷೇಕ srikrishnadevaraya pattabhisheka
Story first published: Monday, January 4, 2010, 17:13 [IST]