ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಲ ಮನ್ನಾ : ರಾಷ್ಟ್ರ ಮಟ್ಟದ ಚರ್ಚೆ ಅಗತ್ಯ

By Staff
|
Google Oneindia Kannada News

Yeddyurappa
ಶಿವಮೊಗ್ಗ, ಜ. 3 : ರೈತರ ಸಾಲ ಮನ್ನಾ ಮಾಡುವುದಕ್ಕೆ ನಾನು ಈಗಲೂ ಸಿದ್ಧ. ಆದರೆ, ಇದಕ್ಕೆ ಹಣ ಎಲ್ಲಿಂದ ತರುವುದು ? ಈ ಸಂಬಂಧ ಪ್ರಧಾನಿ ನೇತೃತ್ವದಲ್ಲಿ ರಾಷ್ಟ್ರೀಯ ಚರ್ಚೆ ನಡೆಯಬೇಕೆಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅಭಿಪ್ರಾಯಪಟ್ಟರು.

ದೇಶದ ಎಲ್ಲ ಮುಖ್ಯಮಂತ್ರಿಗಳ ಸಭೆ ಕರೆದು ಚರ್ಚಿಸಿ ಅಂತಿಮವಾಗಿ ಪ್ರಧಾನಿಯೇ ನಿರ್ಧಾರ ಕೈಗೊಳ್ಳುವುದು ಸೂಕ್ತ, ರೈತರು ಸಮಸ್ಯೆ ಎದುರಿಸುತ್ತಿರುವುದು ನಿಜ. ವೈಜ್ಞಾನಿಕ ಬೆಲೆ ಸೇರಿ ಹಲವು ರೀತಿಯ ಸಮಸ್ಯೆಗಳಿವೆ. ಈ ಸಂಬಂಧ ರಾಷ್ಟ್ರಮಟ್ಟದಲ್ಲಿ ಪರಿವಾರ ರೂಪಿಸುವ ಕೆಲಸವಾಗಬೇಕು ಎಂದರು. ಕೃಷಿಕೆ ಪ್ರತ್ಯೇಕ ಬಜೆಟ್ ಅಸಾಧ್ಯ ಎಂದು ರೈತ ಸಂಘಗಳ ಬೇಡಿಕೆಯನ್ನು ಸಿಎಂ ಸ್ಪಷ್ಟವಾಗಿ ತಳ್ಳಿಹಾಕಿದರು.

ರಾಜ್ಯದ ರೈತರ ಸರ್ವತೋಮುಖ ಅಭಿವೃದ್ಧಿಗೆ ಬಿಜೆಪಿ ಸರಕಾರ ಹಲವು ಕ್ರಮಕೈಗೊಂಡಿದೆ. ಈ ಹಿಂದಿನ ಯಾವ ಸರಕಾರಗಳೂ ಕಲ್ಪಿಸದಷ್ಟು ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ತಾವು ಮಂಡಿಸಿದ ಪ್ರತಿ ಬಜೆಟ್ ನಲ್ಲಿಯೂ ರೈತರಿಗೆ ಮತ್ತು ಕೃಷಿಗೆ ಹೆಚ್ಚಿನ ಆಧ್ಯತೆ ನೀಡಿದ್ದೇನೆ ಎಂದು ಯಡಿಯೂರಪ್ಪ ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X