ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಿಜೆಪಿ ಘನ ಸರಕಾರದಿಂದ ರೈತರಿಗೆ ಮಹಾಮೋಸ
ವಿಧಾನ ಪರಿಷತ್ ನಲ್ಲಿ ಇಂದು ನಿಯಮ 68 ರ ಅಡಿಯಲ್ಲಿ ಚರ್ಚೆಯಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಅವರು ನೆರೆ ಹಾವಳಿ ಗೆ ಸಂಬಂಧಿಸಿದಂತೆ ಮಾತನಾಡಿ, ರೈತರ ಸಾಲ ಮಾಡಲು ಸಾಧ್ಯವಿಲ್ಲ. ಚುನಾವಣೆ ಸಂದರ್ಭದಲ್ಲಿ ಎಲ್ಲರೂ ಭಾಷಣ ಮಾಡುವ ಹಾಗೆ ನಾನು ಕೂಡಾ ಸಾಲ ಮನ್ನಾ ಮಾಡುತ್ತೇನೆ ಎಂದು ಹೇಳಿದ್ದೆ. ಅದು ಮತ ಗಿಟ್ಟಿಸಿಕೊಳ್ಳುವ ತಂತ್ರ ಮಾತ್ರ. ರೈತರ ಸಾಲ ಮನ್ನಾ ಸಾಧ್ಯವಿಲ್ಲ ಎಂದು ಘನ ಸರಕಾರದ ಮುಖ್ಯಮಂತ್ರಿ ಬೂಕನಕೆರೆ ಸಿದ್ಧಲಿಂಗಪ್ಪ ಯಡಿಯೂರಪ್ಪ ಅವರ ಸ್ಪಷ್ಟ ನುಡಿಯಿದೆ ?
ರಾಜ್ಯದ ಬೊಕ್ಕಸದಲ್ಲಿ ಹಣವಿಲ್ಲ. ತೆರಿಗೆ ಸಂಗ್ರಹದಲ್ಲಿ ವಿಫಲವಾಗಿದ್ದು, ಸಾಲ ಮನ್ನಾ ಅಸಾಧ್ಯ ಎಂದು ಮತ್ತೊಮ್ಮೆ ಹೇಳಿದರು. ಸರಕಾರದ ಈ ಕ್ರಮ ಪ್ರತಿಪಕ್ಷಗಳಿಗೆ ದಾಳಿವಾಗಿದ್ದು, ಪ್ರತಿಪಕ್ಷಗಳ ನಾಯಕರಾದ ಸಿದ್ಧರಾಮಯ್ಯ, ವಿ ಎಸ್ ಉಗ್ರಪ್ಪ, ಎಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ರಾಜೀನಾಮೆ ಆಗ್ರಹಿಸಿದ್ದಾರೆ.
Comments
yediyurappa ಯಡಿಯೂರಪ್ಪ ಎಚ್ ಡಿ ಕುಮಾರಸ್ವಾಮಿ hd kumaraswamy siddaramaiah vs ugrappa ಬಜೆಟ್ ಚುನಾವಣೆ ಪ್ರಣಾಳಿಕೆ ವಿ ಎಸ್ ಉಗ್ರಪ್ಪ ವಿಧಾನಪರಿಷತ್ loan waiver ಸಿದ್ಧರಾಮಯ್ಯ ಸಾಲ ಮನ್ನಾ council
Story first published: Thursday, December 31, 2009, 17:22 [IST]