ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಿಜೆಪಿ ಹತ್ತು ಶಾಸಕರು ರಾಜೀನಾಮೆಗೆ ನಿರ್ಧಾರ
ಶಾಸಕರಾದ ಕೊಡಗಿನ ಅಪ್ಪಚ್ಚು ರಂಜನ್, ಮೈಸೂರಿನ ಎ.ಎಸ್.ರಾಮದಾಸ್,ಚಿಕ್ಕಮಗಳೂರಿನ ಸಿ.ಟಿ.ರವಿ, ಬಾಗಲಕೋಟದ ಚರಂತಿಮಠ, ಆನೇಕಲ್ ನಾರಾಯಣಸ್ವಾಮಿ ಮತ್ತಿತರರು ಈ ತಂಡದಲ್ಲಿದ್ದಾರೆ. ಮೊದಲು ಮಂಗಳವಾರ ಬೆಳಗ್ಗೆ ಈ ಶಾಸಕರು ಸಭೆ ಸೇರಿ ಚರ್ಚಿಸಿದ ಬಳಿಕ ರಾಜೀನಾಮೆ ನೀಡುವ ಕುರಿತು ಒಮ್ಮತದನಿರ್ಧಾರ ತೆಗೆದುಕೊಳ್ಳಲು ತೀರ್ಮಾನಿಸಿದ್ದಾರೆ.
ಸರಕಾರದಲ್ಲಿ ನಡೆಯುತ್ತಿರುವ ಬೆಳವಣಿಗೆಯಿಂದಬೇಸತ್ತು, ಸರಕಾರ ಉಳಿಸಿ ಎಂದು ಒತ್ತಾಯಿಸಿ ರಾಜೀನಾಮೆ ನೀಡುತ್ತಿರುವುದಾಗಿ ಈ ಶಾಸಕರು ಕಾರಣ ಕೊಡುತ್ತಾರೆ.ಮುಂದೇನಾಗುತ್ತದೆ ಎಂದು ನಾಳೆವರೆಗೆ ಕಾದು ನೋಡಿ ಎಂದು ಈ ಶಾಸಕರು ಹೇಳುತ್ತಾರೆ. ಇವರು ಕರೆದಿರುವ ಸಭೆಯಲ್ಲಿ 34ಕ್ಕೂ ಹೆಚ್ಚಿನ ಶಾಸಕರುಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
Comments
yediyurappa ಯಡಿಯೂರಪ್ಪ ಬಿಕ್ಕಟ್ಟು ಭಿನ್ನಮತ ರೇಣುಕಾಚಾರ್ಯ ರಾಜೀನಾಮೆ ಸಿ ಟಿ ರವಿ c t ravi rift in bjp dissident mla renukacharya
Story first published: Tuesday, December 29, 2009, 10:18 [IST]