ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಹತ್ತು ಶಾಸಕರು ರಾಜೀನಾಮೆಗೆ ನಿರ್ಧಾರ

By Staff
|
Google Oneindia Kannada News

ten dissident bjp mla to resign
ಬೆಂಗಳೂರು, ಡಿ.29: ರಾಜ್ಯ ಬಿಜೆಪಿಯಲ್ಲಿನ ಭಿನ್ನಮತ ಹೊಸ ತಿರುವು ಪಡೆದಿದ್ದ್ದು ಮುಖ್ಯಮಂತ್ರಿ ಯಡಿಯೂರಪ್ಪ ಸರಕಾರ ಇಕ್ಕಟ್ಟಿಗೆ ಸಿಲುಕಿದೆ. ಬಿಜೆಪಿಯ ಹತ್ತಕ್ಕೂ ಹೆಚ್ಚು ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ತಮ್ಮನ್ನು ಪಕ್ಷದ ನಿಷ್ಠಾವಂತರು ಎಂದು ಕರೆದುಕೊಂಡಿರುವ ಈ ಶಾಸಕರು, ವಿಧಾನಸಭೆ ಸ್ಪೀಕರ್ ಅವರಿಗೆ ಮಂಗಳವಾರ ರಾಜೀನಾಮೆ ಪತ್ರ ಸಲ್ಲಿಸುವ ಸಾಧ್ಯತೆ ಇದೆ. ಈ ಸಂಬಂಧ ಸಮಯ ನಿಗದಿಪಡಿಸುವಂತೆ ಸ್ಪೀಕರ್ ಅವರನ್ನು ಕೋರಿದ್ದಾರೆ.

ಶಾಸಕರಾದ ಕೊಡಗಿನ ಅಪ್ಪಚ್ಚು ರಂಜನ್, ಮೈಸೂರಿನ ಎ.ಎಸ್.ರಾಮದಾಸ್,ಚಿಕ್ಕಮಗಳೂರಿನ ಸಿ.ಟಿ.ರವಿ, ಬಾಗಲಕೋಟದ ಚರಂತಿಮಠ, ಆನೇಕಲ್ ನಾರಾಯಣಸ್ವಾಮಿ ಮತ್ತಿತರರು ಈ ತಂಡದಲ್ಲಿದ್ದಾರೆ. ಮೊದಲು ಮಂಗಳವಾರ ಬೆಳಗ್ಗೆ ಈ ಶಾಸಕರು ಸಭೆ ಸೇರಿ ಚರ್ಚಿಸಿದ ಬಳಿಕ ರಾಜೀನಾಮೆ ನೀಡುವ ಕುರಿತು ಒಮ್ಮತದನಿರ್ಧಾರ ತೆಗೆದುಕೊಳ್ಳಲು ತೀರ್ಮಾನಿಸಿದ್ದಾರೆ.

ಸರಕಾರದಲ್ಲಿ ನಡೆಯುತ್ತಿರುವ ಬೆಳವಣಿಗೆಯಿಂದಬೇಸತ್ತು, ಸರಕಾರ ಉಳಿಸಿ ಎಂದು ಒತ್ತಾಯಿಸಿ ರಾಜೀನಾಮೆ ನೀಡುತ್ತಿರುವುದಾಗಿ ಈ ಶಾಸಕರು ಕಾರಣ ಕೊಡುತ್ತಾರೆ.ಮುಂದೇನಾಗುತ್ತದೆ ಎಂದು ನಾಳೆವರೆಗೆ ಕಾದು ನೋಡಿ ಎಂದು ಈ ಶಾಸಕರು ಹೇಳುತ್ತಾರೆ. ಇವರು ಕರೆದಿರುವ ಸಭೆಯಲ್ಲಿ 34ಕ್ಕೂ ಹೆಚ್ಚಿನ ಶಾಸಕರುಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X