ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೇಣುಕಾ ವಿವಾದ : ವಿಪಕ್ಷಗಳ ತಂತ್ರ

By Staff
|
Google Oneindia Kannada News

KS Eshwarappa
ಬೆಂಗಳೂರು, ಡಿ. 29 : ರೇಣುಕಾಚಾರ್ಯ ಅವರನ್ನು ಸಚಿವ ಸಂಪುಟಕ್ಕೆ ತೆಗೆದುಕೊಂಡಿರುವುದಕ್ಕೆ ವ್ಯಾಪಕ ಟೀಕೆ ಟಿಪ್ಪಣಿಗಳು ಕೇಳಿ ಬರುತ್ತಿರುವ ಬೆನ್ನಲ್ಲೇ ರೇಣುಕಾಚಾರ್ಯ ಸಂಪುಟಕ್ಕೆ ಸೇರ್ಪಡೆ ವಿರೋಧಪಕ್ಷಗಳ ಕುತಂತ್ರಕ್ಕೆ ನಾವು ಮಾಡಿದ ಪ್ರತಿತಂತ್ರ ಎಂದು ಇಂಧನ ಸಚಿವ ಕೆಎಸ್ ಈಶ್ವರಪ್ಪ ಎಂದು ಸ್ಪಷ್ಟಪಡಿಸಿದರು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರಾದ ಗುಲಾಂ ನಬಿ ಅಜಾದ್, ಆಸ್ಕರ್ ಫರ್ನಾಂಡಿಸ್ ಅವರು ರೇಣುಕಾಚಾರ್ಯ ಅವರನ್ನು ಕರೆದು ಮಾತನಾಡಿರಲಿಲ್ಲವೇ ? ಹಣ ಸ್ಥಾನಮಾನ ಕೊಡುತ್ತೇವೆ ಎಂದು ಹೇಳಿ ಪಕ್ಷಕ್ಕೆ ಸೆಳೆದುಕೊಳ್ಳಲು ಪ್ರಯತ್ನಿಸಿರಲಿಲ್ಲವೇ ? ರೇಣುಕಾಚಾರ್ಯ ಕಾಂಗ್ರೆಸ್ ಸೇರಿ ಮಂತ್ರಿಯಾಗಿದ್ದರೆ ಪರಿಶುದ್ಧ ಎಂದು ಅವರು ಒಪ್ಪಿಕೊಳ್ಳುತ್ತಿದ್ದರೇ ? ಎಂದು ಪ್ರಶ್ನೆಗಳ ಸುರಿಮಳೆಯನ್ನೇ ಈಶ್ವರಪ್ಪ ಸುರಿಸಿದರು. ರೇಣುಕಾಚಾರ್ಯ ಗುಂಪಿನ ಶಾಸಕರನ್ನು ಸೆಳೆದು ಸರಕಾರ ರಚಿಸುವ ವಿಪಕ್ಷಗಳ ತಂತ್ರವನ್ನು ವಿಫಲಗೊಳಿಸಲು ಈ ಕ್ರಮ ಕೈಗೊಳ್ಳಲಾಯಿತು ಎಂದು ಅವರು ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X