ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುರ್ಚಿ ಆಸೆಗಾಗಿ ಅನೇಕ ತಪ್ಪು ಮಾಡಿಬಿಟ್ಟೆ!

By Staff
|
Google Oneindia Kannada News

Yeddyurappa
ಬೆಂಗಳೂರು, ಡಿ. 28 : ಒತ್ತಡ ತಂತ್ರಕ್ಕೆ ಮಣಿದು ಕುರ್ಚಿ ಉಳಿಸಿಕೊಳ್ಳಲು ಅನೇಕ ತಪ್ಪುಗಳನ್ನು ಮಾಡಿಬಿಟ್ಟೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ರೇಣುಕಾಚಾರ್ಯ ಅವರ ಕುರ್ಚಿಗೆ ಸಂಬಂಧಿಸಿದಂತೆ ಮಂಗಳವಾರ ಸಂಜೆ ಬಿಜೆಪಿ ಶಾಸಕಾಂಗ ಸಭೆ ನಡೆಯಲಿದೆ.

ಜಚನಿ ಅವರ 100 ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಂದಿನಿಂದ ನಾಡಿನ ಜನರ ಭಾವನೆಗಲಿಗೆ ಧಕ್ಕೆ ತರವಂತಹ ಯಾವ ನಿರ್ಧಾರಗಳನ್ನು ಕೈಗೊಳ್ಳುವುದಿಲ್ಲ ಎಂದರು. ಅಧಿಕಾರಿದಲ್ಲಿ ಮುಂದುವರೆಯುವ ಏಕೈಕ ಉದ್ದೇಶದಿಂದ ಅನೇಕ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಿದ್ದೇನೆ. ಇಂತಹ ಅನೇಕ ತೀರ್ಮಾನಗಳು ನಾಡಿನ ಜನರ ಬಾವನೆಗಳಿಗೆ ವಿರುದ್ಧವಾಗಿವೆ ಎನ್ನುವ ಅರಿವಿದ್ದರೂ ಕುರ್ಚಿ ಆಸೆಗಾಗಿ ಈ ಕೆಲಸ ಮಾಡಬೇಕಾಯಿತು ಎಂದು ತಮ್ಮ ಅಸಹಾಯಕತೆಯನ್ನು ಬಹಿರಂಗಗೊಳಿಸಿದರು.

ಮುಂದಿನ ದಿನಗಳಲ್ಲಿ ಇಂತಹ ತಪ್ಪುಗಳನ್ನು ಮಾಡುವುದಿಲ್ಲ. ತಪ್ಪುಗಳನ್ನು ಮಾಡುವಂತಹ ಅನಿವಾರ್ಯತೆ ಎದುರಾದರೆ ರಾಜೀನಾಮೆಗೂ ಸಿದ್ದ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು. ಮಂಗಳವಾರ ಶಾಸಕಾಂಗ ಸಭೆ ನಡೆಯಲಿದೆ. ಶಾಸಕರು, ಸಚಿವರ ಸಮಸ್ಯೆಗಳನ್ನು ಆಲಿಸಲಾಗುವುದು. ವರಿಷ್ಠರ ತೀರ್ಮಾನದಂತೆ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಯಡಿಯೂರಪ್ಪ ವಿವರಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X