ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರೇಣುಕಾ ಸಂಪುಟದಿಂದ ಕೈಬಿಡಿ: ನರ್ಸ್ ಜಯಲಕ್ಷ್ಮಿ
ರೇಣು ತಮಗೆ ಲೈಂಗಿಕ ಮತ್ತು ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ. ಅಂಥವರು ಸಚಿವರಾಗಬಾರದು. ತಕ್ಷಣವೇ ಅವರನ್ನು ಸಂಪುಟದಿಂದ ಕೈಬಿಡಬೇಕೆಂದು ಆಗ್ರಹಿಸಿ ಹೋರಾಟ ನಡೆಸಲು ಚಿಂತನೆ ನಡೆಸಿರುವುದಾಗಿ ಅವರು ಹೇಳಿದ್ದಾರೆ. ತಮಗೆ 20ಕ್ಕೂ ಹೆಚ್ಚು ಮಹಿಳಾಪರ ಸಂಘಟನೆಗಳು ಬೆಂಬಲ ಸೂಚಿಸಿವೆ. ಸಂಘಟನೆಗಳೊಂದಿಗೆ ಚರ್ಚಿಸಿ ಒಂದೆರೆಡು ದಿನಗಳಲ್ಲಿ ಹೋರಾಟದ ಸ್ವರೂಪ ನಿರ್ಧರಿಸುವುದಾಗಿ ಜಯಲಕ್ಷ್ಮಿ ಹೇಳಿದರು.
ರೇಣುಕಾಚಾರ್ಯ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಒತ್ತಡ ತೀವ್ರಗೊಂಡಿದ್ದು, ವರಿಷ್ಠರ ಅಂಗಳ ತಲುರುವ ನಿರೀಕ್ಷೆ ಇದೆ. ನರ್ಸ್ ಜಯಲಕ್ಷ್ಮಿ ಅವರೊಂದಿಗಿನ ರಾಸಲೀಲೆಗೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರ ಗಮನ ಸೆಳೆಯುವ ಸಾಧ್ಯತೆ ಇದೆ.
Comments
Story first published: Monday, December 28, 2009, 14:41 [IST]