ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಾಂಗ್ರೆಸ್ ಕ್ರಾಂತಿಕಾರಿ ಪಕ್ಷ, ಸೋನಿಯಾ
ಭಾರತ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆಗೊಂಡು 125 ವರ್ಷ ತುಂಬಿದ ಸಂದರ್ಭದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸೋನಿಯಾ, ಪಕ್ಷ ಸದಾ ಜಾತ್ಯಾತೀತ ಮೌಲ್ಯಗಳ ಪರವಾಗಿ ನಿಲ್ಲುತ್ತದೆ, ಬಡವರ ಕಲ್ಯಾಣ ಮತ್ತು ಮಾನವ ಹಕ್ಕುಗಳ ರಕ್ಷಣೆಗೆ ಸರಕಾರ ಪ್ರಮುಖ ಆದ್ಯತೆ ನೀಡುತ್ತದೆ. ಆರ್ಥಿಕ ಸ್ಥಿರತೆಗೆ ಒತ್ತು ನೀಡಿ ದೇಶವನ್ನು ಸಂಪೂರ್ಣ ಅಭಿವೃದ್ದಿಯತ್ತ ಕೊಂಡೊಯ್ಯುವ ರಾಜೀವ್ ಗಾಂಧೀ ಅವರ ಕನಸನ್ನು 21ನೇ ಶತಮಾನದ ವೇಳೆಗೆ ಸಾಕಾರಗೊಳಿಸಲು ಕಾಂಗ್ರೆಸ್ ಪಕ್ಷ ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿಕೆ ನೀಡಿದ್ದಾರೆ.
ಕೋಟ್ಲಾ ರಸ್ತೆಯಲ್ಲಿ ಇಂದಿರಾ ಗಾಂಧಿ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸುತ್ತಾ ಅವರು ಮಾತನಾಡುತ್ತಿದ್ದರು, ಈ ಸಂದರ್ಭದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಹಾಜರಿದ್ದರು. ಅಕ್ಬರ್ ರಸ್ತೆಯಲ್ಲಿರುವ ಎಐಸಿಸಿ ಕಚೇರಿ ಇಲ್ಲಿಗೆ ಸ್ಥಳಾಂತರ ಗೊಳ್ಳಲಿದೆ.
Comments
ಭಾರತ ಕಾಂಗ್ರೆಸ್ congress ಮನಮೋಹನ್ ಸಿಂಗ್ manmohan singh sonia gandhi ಎಐಸಿಸಿ ಸೋನಿಯಾಗಾಂಧಿ ಇಂದಿರಾ ಗಾಂಧಿ indira gandhi ರಾಜೀವ್ ಗಾಂಧಿ ನೆಹರೂ ಮಹಾತ್ಮ ಗಾಂಧೀಜಿ
Story first published: Monday, December 28, 2009, 18:28 [IST]