ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರೇಣುಕಾಚಾರ್ಯ ಬಾಯಿಗೆ ಬ್ಯಾಂಡೇಜ್
ಗುರುವಾರ ಬೆಳಗ್ಗೆ ರಾಜಭವನದಲ್ಲಿ ಜರುಗಿದ ಸರಳ ಸಮಾರಂಭದಲ್ಲಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ರೇಣುಕಾಚಾರ್ಯ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಇದರೊಂದಿಗೆ ಯಡ್ಡಿ ಮಂತ್ರಿ ಮಂಡಳದ ಸ್ಕೋರು 34 ಕ್ಕೆ ಏರಿತು. ಸಂವಿಧಾನ ವಿಧಿಸಿರುವ ಕಟ್ಟಳೆಯಂತೆ ಮುಖ್ಯಮಂತ್ರಿಯೂ ಸೇರಿದಂತೆ ಸಚಿವ ಸಂಪುಟದಲ್ಲಿ 34ಕ್ಕಿಂತ ಹೆಚ್ಚು ಸದಸ್ಯರು ಇರುವಂತಿಲ್ಲ. ರೇಣುಕಾಚಾರ್ಯ ಅವರು ಶಿವಮೊಗ್ಗ ಜಿಲ್ಲೆ ಹೊನ್ನಾಳಿ ಕ್ಷೇತ್ರವನ್ನು ಎರಡನೇ ಬಾರಿಗೆ ಪ್ರತಿನಿಧಿಸುತ್ತಿರುವ ಶಾಸಕರಾಗಿರುತ್ತಾರೆ.
ಪ್ರಮಾಣ ವಚನ ಸಮಾರಂಭದಲ್ಲಿ ಉತ್ತರ ಕರ್ನಾಟಕವನ್ನು ಪ್ರತಿನಿಧಿಸುವ ಇಬ್ಬರು ಸಚಿವರುಗಳಾದ ಜಗದೀಶ್ ಶೆಟ್ಟರ್ ಮತ್ತು ಬಸವರಾಜ್ ಬೊಮ್ಮಾಯಿ ಹಾಜರಿದ್ದರು. ರಾಜಭವನದ ಶಿಷ್ಟಾಚಾರದ ಅನ್ವಯ ಕೆಲವು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಹೊರತು ಪಡಿಸಿದರೆ ಪ್ರಮಾಣ ವಚನಕ್ಕೆ ಸಮಾರಂಭದ ಖಳೆ ಇರಲಿಲ್ಲ. ನೂತನ ಸಚಿವ ರೇಣುಕಾಚಾರ್ಯ ಅವರಿಗೆ ಯಾವ ಖಾತೆ ಕೊಡಲಾಗುವುದು ಎಂಬ ಬಗ್ಗೆ ಯಡ್ಡಿ ಅವರಿಂದ ಸುಳಿವು ದೊರೆತಿಲ್ಲ.
( ದಟ್ಸ್ ಕನ್ನಡ ವಾರ್ತೆ)
Comments
ಬಿಜೆಪಿ ಪ್ರಮಾಣ ವಚನ ಭಿನ್ನಮತ renukacharya ಶಾಸಕ ಬಿಎಸ್ ವೈ ಎಂಪಿ ರೇಣುಕಾಚಾರ್ಯ ಹೊನ್ನಾಳಿ honnali dissident mla ಸಚಿವ ಸಂಪುಟ ವಿಸ್ತರಣೆ ರಾಜ ಭವನ
Story first published: Thursday, December 24, 2009, 12:17 [IST]