ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಡಿ.22: ತೆಲಂಗಾಣದ ಹಣೆಬರಹ ನಿರ್ಧಾರ
ತೆಲಂಗಾಣ ಪ್ರತ್ಯೇಕ ರಾಜ್ಯಕ್ಕೆ ಕೇಂದ್ರ ಸರಕಾರ ಸಮ್ಮತಿಸಿದ ನಂತರ ಆಗಿರುವ ಎಲ್ಲ ಬೆಳವಣಿಗೆಯನ್ನು ಸರಕಾರ ಕೂಲಂಕಷವಾಗಿ ಪರಿಶೀಲನೆ ನಡೆಸಿದೆ. ರಾಯಲುಸೀಮಾ ಮತ್ತು ಕರಾವಳಿ ಆಂಧ್ರಪ್ರದೇಶದ ಜನರ ವಿರೋದ ಕೂಡಾ ಗಮನಿಸಲಾಗುತ್ತದೆ. ಮಂಗಳವಾರ ಸಂಪುಟದ ಹಿರಿಯ ಸಹದ್ಯೋಗಿಗಲೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರಕ್ಕೆ ಬರಲಾಗುವುದು ಎಂದು ಸಿಂಗ್ ವಿವರಿಸಿದರು.
ಪ್ರಧಾನಮಂತ್ರಿ ಬೇಟಿ ಮಾಡಲು ತೆರಳಿದ ಸಂಸದರ ನಿಯೋಗವು, ಆಂಧ್ರಪ್ರದೇಶದಲ್ಲಿ ಆಗುತ್ತಿರುವ ನಿತ್ಯದ ಬೆಳವಣಿಗೆಯನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಪ್ರತಿಭಟನೆ, ಉಪವಾಸ ಸತ್ಯಾಗ್ರಹಗಳು ನಡೆಯುತ್ತಲೇ ಇವೆ. ಪಕ್ಷಬೇದ ಮರೆತ ಶಾಸಕರು, ಸಂಸದರು ತೆಲಂಗಾಣ ರಾಜ್ಯಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತ್ಯೇಕ ರಾಜ್ಯದ ರಚನೆಯನ್ನು ಕೈಬಿಡಬೇಕು ಎಂದು ನಿಯೋಗ ಒತ್ತಾಯಿಸಿದೆ. ನಿಯೋಗದಲ್ಲಿ ಕಾಂಗ್ರೆಸ್ ಸಂಸದರು ಹಾಗೂ ಕೇಂದ್ರಮಂತ್ರಿಗಳಾದ ಪಣಬಕ್ ಲಕ್ಷ್ಮಿ ಮತ್ತು ಸುಬ್ರಮಣಿ ರೆಡ್ಡಿ ಇರುವುದು ವಿಶೇಷವಾಗಿದೆ.
Comments
ಕಾಂಗ್ರೆಸ್ congress ಮನಮೋಹನ್ ಸಿಂಗ್ manmohan singh andhra pradesh ಆಂಧ್ರ ಪ್ರದೇಶ telangana state ತೆಲಂಗಾಣ rayalaseema
Story first published: Monday, December 21, 2009, 19:26 [IST]