ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮರಳು ಲಾರಿ ಮುಷ್ಕರ ಅಂತ್ಯ: ಅಶೋಕ್
ಅಶೋಕ್ ನಡೆಸಿದ ಸಂಧಾನ ಸಭೆಯ ಸಂಕ್ಷಿಪ್ತ ವಿವರ:
*ಹೈಕೋರ್ಟ್ ತಡೆಯಾಜ್ಞೆ ಇರುವಲ್ಲಿ ಬಿಟ್ಟು ಉಳಿದ ಕಡೆ ಮರಳು ತೆಗೆಯು ವುದಕ್ಕೆ ಟೆಂಡರ್ ಮೂಲಕ ಪರವಾನಗಿ ನೀಡಲಾಗುವುದು.
* ಅಕ್ರಮ ಮರಳು ಗಣಿಗಾರಿಕೆ ಹಾಗೂ ಫಿಲ್ಟರ್ ಮರಳು ತೆಗೆಯುವುದನ್ನು ನಿಲ್ಲಿಸುವ ಸಂಬಂಧ ಕಾರ್ಯಪಡೆ ರಚಿಸಲಾಗುವುದು.
* ಕಾರ್ಯಪಡೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಂದಾಯ, ಪರಿಸರ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಇರಲಿದ್ದಾರೆ
* ತಮಿಳುನಾಡು ಮಾದರಿಯಲ್ಲಿ ಮರಳು ನೀತಿ ,ಮುಂದಿನ ಬಜೆಟ್ ಒಳಗೆ ಹೊಸ ನೀತಿ ಜಾರಿಗೆ ತರಲಾಗುವುದು.
* ಮರಳು ಸಾಗಣೆ ಲಾರಿಗಳನ್ನು ಗುರುತಿಸಲು ಪ್ರತ್ಯೇಕ ಬಣ್ಣ ಬಳಿಯುವಂತೆ ಸೂಚಿಸಲಾಗಿದೆ.
* ಪರಿಸರಕ್ಕೆ ಧಕ್ಕೆ ಬಾರದಂತೆ ಮೂರು ಅಡಿ ಗಿಂತ ಹೆಚ್ಚಿನ ಆಳಕ್ಕೆ ಮರಳು ತೆಗೆಯಬಾರದು . ಪ್ರತಿ ಲಾರಿಗೆ ಮಾಸಿಕ ಕನಿಷ್ಠ 15 ಪರ್ಮಿಟ್ ಪಡೆದುಕೊಳ್ಳಲೇಬೇಕು.
*ಇನ್ನು ಮುಂದೆ ಮರಳು ಲಾರಿಗಳ ಮೇಲೆ ಪೊಲೀಸರು ಕೇಸು ದಾಖಲಿಸುವುದಿಲ್ಲ. ಆದರೆ, ರಸ್ತೆಯುದ್ದಕ್ಕೂ ಮರಳು ಚೆಲ್ಲದಂತೆ ಹಾಗೂ ವಾಹನ ಸವಾರರಿಗೆ ಅಡಚಣೆಯಾಗದಂತೆ ಮೇಲೆ ಟಾರ್ಪಲಿನ್ ಮುಚ್ಚಿ ಸಾಗಣೆ ಮಾಡಬೇಕು
*ಬೆಂಗಳೂರಿನಲ್ಲಿ ಲಾರಿಗಳಿಗೆ ಸೂಕ್ತ ನಿಲುಗಡೆ ತಾಣ ಬೇಕಾಗಿದೆ.ರಿಂಗ್ ರಸ್ತೆಯಲ್ಲಿ ಜಾಗ ನೀಡುವಂತೆ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಬೇಡಿಕೆ.
(ದಟ್ಸ್ ಕನ್ನಡವಾರ್ತೆ)
Comments
bjp ಬಿಜೆಪಿ ಬೆಂಗಳೂರು mining ಬಿಬಿಎಂಪಿ ಆರ್ ಅಶೋಕ್ r ashok bbmp ಮುಷ್ಕರ ಸಾರಿಗೆ ಸಚಿವ transport minister transport ಲಾರಿ sand truckers strike gr shanmugappa ಮರಳು
Story first published: Friday, December 18, 2009, 12:11 [IST]