ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಓಎಂಸಿ ಗಣಿ ಸಿಬಿಐ ತನಿಖೆಗೆ ತಡೆಯಾಜ್ಞೆ
ಅನಂತಪುರಂನಲ್ಲಿನ ಓಎಂಸಿ ಅಕ್ರಮ ಗಣಿಗಾರಿಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾಯಪೀಠ ಸಿಬಿಐ ತನಿಖೆಗೆ ತಡೆ ನೀಡಿ ಮಧ್ಯಂತರ ಆದೇಶ ಹೊರಡಿಸಿದೆ ಮತ್ತು ಮುಂದಿನ ವಿಚಾರಣೆಯನ್ನು ಡಿ 29ಕ್ಕೆ ಮುಂದೂಡಿದೆ. ವಿಪಕ್ಷಗಳ ಒತ್ತಡಕ್ಕೆ ಮಣಿದು ರೋಸಯ್ಯ ಸರಕಾರ, ಕೇಂದ್ರ ಉನ್ನತಾಧಿಕಾರ ಸಮಿತಿಯ ಶಿಫಾರಸಿನ ಮೇರೆಗೆ ಗಣಿಗಾರಿಕೆ ಚಟುವಟಿಕೆ ನಿಷೇಧಿಸಿ ಆದೇಶ ಹೊರಡಿಸಿತ್ತು ಅಲ್ಲದೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿತ್ತು. ಆಂಧ್ರ ಸರ್ಕಾರದ ಆದೇಶವನ್ನು ಪ್ರಸ್ತ್ನಿಸಿ ಜನಾರ್ಧನ ರೆಡ್ಡಿ ಹೈಕೋರ್ಟ್ ನಲ್ಲಿ ಮನವಿ ಸಲ್ಲಿಸಿದ್ದರು. ಶುಕ್ರವಾರ ( ಡಿ11 ) ಪ್ರಕರಣದ ತನಿಖೆ ನಡೆಸಿದ್ದ ನ್ಯಾಯಾಲಯ ಆಂಧ್ರ ಪ್ರದೇಶ ಸರಕರಾದ ಆದೇಶಕ್ಕೆ ತಡೆ ನೀಡಿತ್ತು.
(ಏಜೆನ್ಸೀಸ್)
Comments
kannada high court ಕನ್ನಡ hyderabad ಬಳ್ಳಾರಿ ಜನಾರ್ದನ ರೆಡ್ಡಿ illegal mining cbi ಅಕ್ರಮ ಗಣಿಗಾರಿಕೆ janardhana reddy reddy brothers ರೆಡ್ಡಿ ಸಹೋದರರು omc
Story first published: Monday, December 14, 2009, 18:39 [IST]