ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಇಎಸ್ ಕುತಂತ್ರ, ಹೊಸ ರಾಜ್ಯಕ್ಕೆ ಆಗ್ರಹ

By Staff
|
Google Oneindia Kannada News

Belgaum
ಬೆಂಗಳೂರು, ಡಿ. 11 : ಬೆಳಗಾವಿ, ನಿಪ್ಪಾಣಿ, ಖಾನಾಪುರ, ಬೀದರ್, ಭಾಲ್ಕಿ, ಕಾರವಾರ ಸೇರಿ 805 ಮರಾಠಿ ಭಾಷಿಗರ ಪ್ರದೇಶಗಳನ್ನು ಸೇರಿಸಿ ಪ್ರತ್ಯೇಕ ರಾಜ್ಯ ನಿರ್ಮಾಣ ಮಾಡಬೇಕೆಂದು ಮಹಾರಾಷ್ಟ್ರ ಏಕೀಕರಣ ಸಮಿತಿ ಒತ್ತಾಯಿಸಿದೆ. ಅತ್ತ, ಆಂಧ್ರದಲ್ಲಿ ಕರ್ನಾಟಕದ ಬಳ್ಳಾರಿ ಸೇರಿದಂತೆ ಗ್ರೇಟರ್ ರಾಯಲ್ ಸೀಮಾವನ್ನು ಪ್ರತ್ಯೇಕ ರಾಜ್ಯವನ್ನಾಗಿಸಬೇಕೆಂಬ ಕೂಗು ಎದ್ದಿದೆ. ವರ್ಷಗಳ ಹಿಂದೆ ಪ್ರತ್ಯೇಕ ಕೊಡಗು ರಾಜ್ಯಕ್ಕಾಗಿ ಪ್ರತಿಭಟನೆ ನಡೆದಿತ್ತು.

ಎಂಇಎಸ್ ನ ಒಂದು ಗುಂಪಿನ ಅಧ್ಯಕ್ಷ ಟಿ ಕೆ ಪಾಟೀಲ್, ತೆಲಂಗಾಣ ಮಾದರಿಯಲ್ಲೇ ಮರಾಠಿ ಭಾಷಿಗರೆಲ್ಲ ಒಗ್ಗೂಡಿ, ಶಕ್ತಿ ಪ್ರದರ್ಶಿಸಿ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ನಡೆಸಬೇಕು. ಇದಕ್ಕೆ ಮಹಾರಾಷ್ಟ್ರದ ನಾಯಕರುಗಳು ಬೆಂಬಲ ನೀಡಬೇಕು. ಈ ಮೂಲಕ ಕರ್ನಾಟಕದ ಕಪಿ ಮುಷ್ಠಿಯಿಂದ ಮರಾಠಿಗರನ್ನು ಬಿಡುಗಡೆ ಮಾಡಿಸಬೇಕೆಂದು ಪಾಟೀಲ್ ಕರೆ ನೀಡಿದ್ದಾರೆ.

ಅತ್ತ ಆಂಧ್ರಪ್ರದೇಶದಲ್ಲಿ ಕರ್ನಾಟಕದ ಬಳ್ಳಾರಿ, ಕಡಪ, ಕರ್ನೂಲ್, ಚಿತ್ತೂರು, ಅನಂತಪುರಂ, ನೆಲ್ಲೂರು ಮತ್ತು ಪ್ರಕಾಶಂ ಜಿಲ್ಲೆಗಳನ್ನು ಗ್ರೇಟರ್ ರಾಯಲ್ ಸೀಮಾದಲ್ಲಿ ಸೇರ್ಪಡೆಗೊಳಿಸಬೇಕು. ಇದಕ್ಕಾಗಿ ಸೋನಿಯಾ ಅವರ ಮನೆ ಮುಂದೆ ಧರಣಿ ನಡೆಸುವುದಾಗಿ ರಾಯಲ್ ಸೀಮಾ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಕುಂಚುಂ ವೆಂಕಟಸುಬ್ಬಾರೆಡ್ಡಿ ಹೇಳಿಕೆ ನೀಡಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X