ಸಾರಿ ತಪ್ಪಾಗಿದೆ ಮನ್ನಿಸಿ, ಮನಮೋಹನ್ ಸಿಂಗ್
ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂ ಎಸ್ ಲಿಬರ್ಹಾನ್ ವರದಿ ಬಗ್ಗೆ ಚರ್ಚೆಯ ಸಂದರ್ಭದಲ್ಲಿ ಕಾಂಗ್ರೆಸ್ ನ ಸಂಸದ ಬೆನಿ ಪ್ರಸಾದ್ ಪ್ರಸಾದ್ ವರ್ಮಾ ಅವರು ಅಟಲ್ ಬಿಹಾರಿ ವಾಜಪೇಯಿ ಸಣ್ಣ ಮನುಷ್ಯ ಎಂದು ಟೀಕಿಸಿದ್ದರು. ಇಂದು ಸದನ ಆರಂಭವಾಗುತ್ತಿದ್ದಂತೆಯೇ ಬಿಜೆಪಿ ಸಂಸದರು ಕಾಂಗ್ರೆಸ್ ಮತ್ತು ಸರಕಾರದ ವಿರುದ್ಧ ವಾಗ್ದಾಳಿ ಆರಂಭಿಸಿದರು. ವಾಜಪೇಯಿ ಅವರ ಬಗ್ಗೆ ನೀಡಿರುವ ಆಕ್ಷೇಪಾರ್ಹ ಹೇಳಿಕೆಗೆ ಸರಕಾರ ಸದನದ ಕ್ಷಮೆಯಾಚಿಸಬೇಕು ಎಂದು ಪಟ್ಟು ಹಿಡಿದರು.
ತಕ್ಷಣ ಎದ್ದು ನಿಂತ ಪ್ರಧಾನಮಂತ್ರಿ ಮನಮೋಹನ್ ಸಿಂಗ್, ಹಿರಿಯ ನಾಯಕ ಅಟಲ್ ಜೀ ಅವರ ಮೇಲೆ ನನಗೆ ಅಪಾರ ಗೌರವವಿದೆ. ಕಾಂಗ್ರೆಸ್ ಸಂಸದ ಬೆನಿ ಪ್ರಸಾದ್ ವರ್ಮಾ ಮಾಡಿರುವ ಆರೋಪಕ್ಕೆ ನಾನು ಸದನದ ಕ್ಷಮೆಯಾಚಿಸುವೆ ಎಂದು ವಿವಾದಕ್ಕೆ ತೆರೆ ಎಳೆಯಲು ಪ್ರಯತ್ನಿಸಿದರು. ಮಾತು ಮುಂದುವರಿಸಿದ ಪಿಎಂ, ನಾನು ಕಳೆದ ಕೆಲ ದಿನಗಳಿಂದ ವಿದೇಶಿ ಪ್ರವಾಸದಲ್ಲಿದ್ದೆ, ಅಲ್ಲಿಂದಲೇ ಸದನದ ಎಲ್ಲ ಕಾರ್ಯ ಕಲಾಪಗಳನ್ನುವ ವೀಕ್ಷಿಸುತ್ತಿದ್ದು, ವರ್ಮಾ ಅವರು ಅಟಲ್ ಜೀ ಅವರ ಮೇಲೆ ಮಾಡಿರುವ ಆರೋಪಕ್ಕೆ ನಮ್ಮ ಬೆಂಬಲವಿಲ್ಲ. ಅದು ತಪ್ಪು ಎನ್ನುವುದು ನನ್ನ ಅಭಿಪ್ರಾಯ. ಈ ಬಗ್ಗೆ ನನಗೆ ನೋವಾಗಿದ್ದು, ಸರಕಾರ ಮತ್ತು ಕಾಂಗ್ರೆಸ್ ಪಕ್ಷದ ಪರವಾಗಿ ಕ್ಷಮೆಯಾಚಿಸುವೆ ಎಂದು ಎಂದು ಸಿಂಗ್ ಹೇಳಿದರು.
(ಏಜನ್ಸೀಸ್)