ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ದತ್ತ ಪೀಠವನ್ನು ಬಾಬ್ರಿ ಮಾಡಲು ಹೊರಟ ಬಿಜೆಪಿ
ನಗರದಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾನೂನು ಉಲ್ಲಂಘಿಸಿ ದತ್ತು ಪಾದುಕೆಯನ್ನು ಸಾರ್ವಜನಿಕ ದರುಶನಕ್ಕೆ ಅವಕಾಶ ಮಾಡಿಕೊಟ್ಟಿರುವುದು ಏಕೆ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 1975ರಲ್ಲಿ ನ್ಯಾಯಾಲಯ ನೀಡಿದ ಆದೇಶದಂತೆ ದತ್ತು ಪಾದುಕೆಯನ್ನು ಸಾರ್ವಜನಿಕವಾಗಿ ಯಾವ ಕಾರಣಕ್ಕೂ ಹೊರಗೆ ತರಕೂಡದು ಎಂದು ಸ್ಪಷ್ಟವಾಗಿ ಹೇಳಿದೆ. ಆದರೂ ಕೂಡಾ ಜಿಲ್ಲಾಡಳಿತದ ಮೇಲೆ ಪ್ರಭಾವ ಬೀರಿ ಪಾದುಕೆಯನ್ನು ಸಾರ್ವಜನಿಕ ದರುಶನಕ್ಕೆ ಇಡಲಾಗಿದೆ ಎಂದು ಆರೋಪಿಸಿದರು.
ಈ ಮೂಲಕ ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರಕಾರ ನ್ಯಾಯಾಲಯದ ಆದೇಶವನ್ನು ಗಾಳಿಗೆ ತೂರಿ ಕಾನೂನು ಉಲ್ಲಂಘಿಸಿದೆ. ಸರಕಾರದ ಕ್ರಮದ ವಿರುದ್ದ ಹೈಕೋರ್ಟ್ ನಲ್ಲಿ ದಾವೆ ಹೂಡಲಾಗುವುದು ಎಂದು ದತ್ತ ಹೇಳಿದರು. ಸರಕಾರದ ಕ್ರಮ ಖಂಡಿಸಿ ಡಿಸೆಂಬರ್ 8 ರಂದು ಜೆಡಿಎಸ್ ವತಿಯಿಂದ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅವರು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)
Comments
bjp ಬಿಜೆಪಿ ಜೆಡಿಎಸ್ ಯಡಿಯೂರಪ್ಪ high court ಹೈಕೋರ್ಟ್ ysv datta datta peeta ದತ್ತ ಪೀಠ ಚಿಕ್ಕಮಗಳೂರು ವೈಎಸ್ ವಿ ದತ್ತಾ chikmagalur ಬಾಬಾಬುಡನ್ ಗಿರಿ bababudangiri
Story first published: Wednesday, December 2, 2009, 14:29 [IST]