ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದಲ್ಲಿ ಗೋಹತ್ಯೆ ನಿಷೇಧಿಸಿ, ಸಿಂಘಾಲ್

By Staff
|
Google Oneindia Kannada News

Centre should enact a law banning cow slaughter ; Singhal
ಬೆಂಗಳೂರು, ಡಿ. 2 : ದೇಶದಲ್ಲಿ ಗೋಹತ್ಯೆ ನಿಷೇಧಿಸಬೇಕೆಂದು ವಿಶ್ವ ಹಿಂದು ಪರಿಷತ್ ನ ಅಂತಾರಾಷ್ಟ್ರೀಯ ಅಧ್ಯಕ್ಷ ಅಶೋಕ್ ಸಿಂಘಾಲ್ ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ.

ನಗರದಲ್ಲಿ ಏರ್ಪಡಿಸಲಾಗಿದ್ದ ವಿರಾಟ ಜನಜಾಗರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗೋಹತ್ಯೆ ಹಾಗೂ ಗ್ರಾಮ ಸಂರಕ್ಷಣೆಗಾಗಿ ದೇಶದಲ್ಲಿ ವಿಶ್ವಮಂಗಲ ಗೋ-ಗ್ರಾಮ ಯಾತ್ರೆ ಸಂಘಟಿಸಲಾಗಿದೆ. ಈ ಯಾತ್ರೆಯು ಕುರುಕ್ಷೇತ್ರದಿಂದ ಹೊರಟು ನಾಗಪುರದವರೆಗೆ ಸಾಗಲಿದೆ ಎಂದರು. ಗೋಹತ್ಯೆಯನ್ನು ಗುಜರಾತ್ ಸರಕಾರ ನಿಷೇಧಿಸಿದೆ. ಇದೇ ರೀತಿ ಕೇಂದ್ರ ಸರಕಾರ ದೇಶದಲ್ಲಿ ಗೋಹತ್ಯೆ ನಿಷೇಧಿಸುವ ಕಾನೂನು ಜಾರಿಗೆ ತರಬೇಕು ಎಂದು ಅವರು ಒತ್ತಾಯಿಸಿದರು.

ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತರಲು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲು ದೊಡ್ಡ ಆಂದೋಲನವನ್ನೇ ಸಂಘಟಿಸಲಾಗಿದೆ. 2010 ರಲ್ಲಿ ನಡೆಯುವ ಕುಂಭ ಮೇಳದ ವೇಳೆ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ಆಗ್ರಹಿಸಿ, ಎಲ್ಲಾ ಸಾಧು-ಸಂತರು ಒಂದೇ ಕಡೆ ಸೇರಿ ಕೇಂದ್ರದ ಮೇಲೆ ಒತ್ತಡ ತರಬೇಕು. ಗೋವುಗಳು ಮತ್ತು ನಮ್ಮ ಹಳ್ಳಿಗಳು ದೇಶದ ಸಂಸ್ಕೃತಿ. ಇವುಗಳ ರಕ್ಷಣೆ ಆಗಬೇಕು ಎಂದು ಸಿಂಘಾಲ್ ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X