ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಬಾಬುಡನ್ ಗಿರಿಯಲ್ಲಿ ದತ್ತ ಜಯಂತಿಗೆ ಚಾಲನೆ

By Staff
|
Google Oneindia Kannada News

 Datta Jayanti off to glorious start
ಚಿಕ್ಕಮಗಳೂರು, ನ. 30 : ಸಂಘ ಪರಿವಾರ ಆಯೋಜಿಸಿರುವ 3 ದಿನಗಳ ದತ್ತ ಜಯಂತಿ ಅಭಿಯಾನಕ್ಕೆ ಹಿಂದೂ ಮುಸ್ಲಿಂ ಭಾವೈಕ್ಯ ಕ್ಷೇತ್ರ ಗಿರಿಕಂದಕಗಳ ಸಂಗಮ ಜಿಲ್ಲೆಯ ಬಾಬಾಬುಡನಗಿರಿಸ್ವಾಮಿ ದರ್ಗಾ ಸಮೀಪ ಚಾಲನೆ ದೊರೆಯಿತು.

ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ಮಾತೆಯರು ದತ್ತ ಭಜನೆ, ಗಣಪತಿ ಹೋಮಗಳಲ್ಲಿ ಭಾಗವಹಿಸಿ ದತ್ತವಿಗ್ರಹಕ್ಕೆ ಪೂಜೆ ಸಲ್ಲಿಸಿ ಭಕ್ತಿಭಾವ ಮೆರೆದರು. ಅಗತ್ಯ ಪ್ರಮಾಣದಲ್ಲಿ ಪೊಲೀಸರನ್ನು ಪೀಠಕ್ಕೆ ರವಾನಿಸಲಾಗಿತ್ತಾದರೂ ಭಕ್ತರಿಗಿಂತ ಅವರೇ ಅಧಿಕವಾಗಿದ್ದರು. ಗುಹೆ ದುರಸ್ತಿ ಹಿನ್ನೆಲೆಯಲ್ಲಿ ಪೀಠದ ಆವರಣ ಪ್ರವೇಶ, ದತ್ತ ಪಾದುಕೆ ದರ್ಶನ ನಿರ್ಬಂಧಿಸಲಾಗಿತ್ತು. ಹಿತವಾದ ಹವಾಮಾನ ಕಾರ್ಯಕ್ರಮಕ್ಕೆ ಪೂರಕವಾಗಿತ್ತು. ಇದಕ್ಕೂ ಮೊದಲು ದತ್ತ ಜಯಂತಿ ಮೊದಲ ಚರಣವಾದ ಅನುಸೂಯಾ ಜಯಂತಿಗೆ ಜಿಲ್ಲಾ ಕೇಂದ್ರದಲ್ಲಿ ಚಾಲನೆ ಸಿಕ್ಕಿತು.

ಚಿಕ್ಕಮಗಳೂರಿನ ಬೋಳರಾಮೇಶ್ವರ ದೇವಾಲಯ ಆವರಣದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿರುವ ನೂರಾರು ವನಿತೆಯರು ದತ್ತ ಅನುಸೂಯಾ ಭಜನೆ ನರವೇರಿಸಿದರು. ಇಂದಿರಾಗಾಂಧಿ ರಸ್ತೆಯಲ್ಲಿ ಸಂಕೀರ್ತನಾ ಯಾತ್ರೆ ನಡೆಸಿ ಗಮನ ಸೆಳೆಯಿತು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X