ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಸಬ್ ಪರ ವಕೀಲ ಅಬ್ಬಾಸ್ ಕಜ್ಮಿ ವಜಾ
ಕಸಬ್ ಪ್ರಕರಣ ದೇಶದ ಅತ್ಯಂತ ಸೂಕ್ಷ್ಮ ಪ್ರಕರಣವಾಗಿದೆ. ಇಂತಹ ಪ್ರಕರಣ ಪರ ವಕೀಲರಾಗಿರುವ ಕಜ್ಮಿ ತೋರಿದ ನಿರ್ಲಕ್ಷ ಸರಿಯಲ್ಲ. ಇದರಿಂದಾಗಿ ನ್ಯಾಯಾಲಯದ ಕಾರ್ಯಕಲಾಪಗಳಿಗೆ ಅಗೌರವ ಅಶಿಸ್ತು ಪ್ರದರ್ಶಿಸಿದ್ದ ಕಜ್ಮಿಗೆ ಈ ಹಿಂದೆಯೇ ಮುಂಬೈ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಂ ಎಲ್ ತೆಹಿಲಿಯಾನಿ ಎಚ್ಚರಿಕೆ ನೀಡಿದ್ದರು. ಅವರ ಅಶಿಸ್ತಿನ ವರ್ತನೆ ಮುಂದುವರೆದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಸ್ಥಾನದಿಂದ ವಜಾಗೊಳಿಸಲಾಗಿದೆ ಎಂದು ನ್ಯಾಯಾಲಯ ವಿವರಿಸಿದೆ. ನ್ಯಾಯಾಲಯದ ಅ ಕ್ರಮ ಅಚ್ಚರಿ ತರಿಸಿದೆ ಎಂದು ಸರಕಾರದ ಪರ ವಕೀಲ ಉಜ್ವಲ್ ನಿಕ್ಕಂ ಹೇಳಿದ್ದಾರೆ.
(ಏಜನ್ಸೀಸ್)
Comments
mumbai terror attack ಭಾರತ pakistan ಪಾಕಿಸ್ತಾನ ಮುಂಬೈ ಭಯೋತ್ಪಾದನೆ abbas kazmi ಅಬ್ಬಾಸ್ ಕಜ್ಮಿ ml tehaliyani ವಜಾ
Story first published: Monday, November 30, 2009, 14:24 [IST]