ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಸಬ್ ನನ್ನು ನೇಣಿಗೇರಿಸಲು ಒತ್ತಾಯ
26/11 ಅಂಗವಾಗಿ ನಗರದ ನಾರಿಮನ್ ಪಾಯಿಂಟ್ ನಿಂದ ಪ್ರಮುಖ ಬೀದಿಗಳಲ್ಲಿ ಮಹಾರಾಷ್ಟ್ರ ಪೊಲೀಸ್ ಇಲಾಖೆ, ಮಹಾರಾಷ್ಟ್ರ ಭಯೋತ್ಪಾದಕ ನಿಗ್ರಹ ಪಡೆ ಫಥಸಂಚಲನ ನಡೆಸಿದರು. ಗಿರ್ಗಮ್ ಚೌಪಟಿಯಲ್ಲಿ ಫಥಸಂಚಲವನ್ನು ಕೊನೆಗೊಳಿಸಲಾಯಿತು. ಮುಖ್ಯಮಂತ್ರಿ ಅಶೋಕ್ ಚವಾಣ್, ಉಪಮುಖ್ಯಮಂತ್ರಿ ಛಗನ್ ಭುಜಬಲ್ ಸೇರಿದಂತೆ ಅನೇತ ಸಚಿವರು, ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
26/11 ಹಿನ್ನೆಲೆಯಲ್ಲಿ ನಗರದ ಬಹುತೇಕ ಕಂಪನಿಗಳು ತಡೆವಾಗಿ ಕಚೇರಿಗಳನ್ನು ಆರಂಭಿಸಿವೆ. ಸಾವಿರಾರು ಜನ ದಾಳಿಗೊಳಗಾದ ಸ್ಥಳಗಳಿಗೆ ಭೇಟಿ ದೀಪ ಬೆಳೆಸಿದರು. ಈ ಸಂದರ್ಭದಲ್ಲಿ ಸೇರಿದ್ದ ಜನಸಾಮಾನ್ಯರು ಕಸಬ್, ಪಾಕಿಸ್ತಾನ ಹಾಗೂ ಉಗ್ರ ಸಂಘಟನೆಗಳು ಘೋಷಣೆ ಕೂಗಿದರು. ಅಲ್ಲದೇ, ಸುಮಾರು 160 ಮಂದಿ ಸಾವಿಗೆ ಕಾರಣನಾಗಿರುವ ಉಗ್ರ ಕಸಬ್ ನನ್ನು ಕೂಡಲೇ ನೇಣಿಗೇರಿಸಿ ಮೃತ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡಬೇಕು ಎಂದು ಸಂದೇಶ ಹೊಂದಿದೆ ಅನೇಕ ಫಲಕಗಳು ರಾರಾಜಿಸುತ್ತಿದ್ದವು.
(ಏಜನ್ಸೀಸ್)
Comments
mumbai terror attack ajmal kasab ಅಜ್ಮಲ್ ಕಸಬ್ ಲಷ್ಕರ್ ಇ ತೊಯ್ಬಾ ಮುಂಬೈ ಭಯೋತ್ಪಾದನೆ taj hotel ತಾಜ್ ಹೋಟೆಲ್ ವರ್ಷಾಚರಣೆ
Story first published: Thursday, November 26, 2009, 15:39 [IST]