ಭಾರತದಲ್ಲಿ ಪಾಕಿಸ್ತಾನದ ಬಿಳಿ ಆನೆ
ಕಸಬ್ ಸಿಕ್ಕ ನಂತರ ಮಹಾರಾಷ್ಟ್ರ ಸರಕಾರ ಖರ್ಚು ಮಾಡಿದ ಒಟ್ಟು 30 ಕೋಟಿ ರುಪಾಯಿಗಳು, ಅಂದರೆ, ಪ್ರತಿದಿನ 85 ಲಕ್ಷ ರುಪಾಯಿಗಳು. 21 ವರ್ಷದ ಪಾಕಿಸ್ತಾನ ಮೂಲಕ ಪರೀದಕೋಟ್ ನಗರದ ಈ ಉಗ್ರನಿಗೆ ಲಷ್ಕರ್ ಇ ತೊಯ್ಬಾ ಸಂಘಟನೆ ನಂಟಿರುವುದು ವಿಚಾರಣೆ ಸ್ಪಷ್ಟವಾಗಿದೆ. ಕಸಬ್ ಸೇರಿದಂತೆ ರಾಜ್ಯ ಮತ್ತು ದೇಶದ ಹಿತ ಮುಖ್ಯ, ಹಣದ ಲೆಕ್ಕಕ್ಕಿಂತಲೂ ದೇಶಧ ಸಮಗ್ರತೆ ಅತಿಮುಖ್ಯ, ಹಾಗಾಗಿ ಕಸಬ್ ಗೆ ಖರ್ಚು ಮಾಡಿದ ಹಣಕ್ಕೆ ಪ್ರಾಮುಖ್ಯತೆ ನೀಡುವುದಿಲ್ಲ ಎಂದು ಮಹಾರಾಷ್ಟ್ರ ಸರಕಾರದ ಗೃಹ ಇಲಾಖೆ ಹಿರಿಯ ಅಧಿಕಾರಿಗಳ ಅನಿಸಿಕೆಯಾಗಿದೆ.
ಕಸಬ್ ನ ರಕ್ಷಣೆಗಾಗಿ ಆರ್ಥರ್ ರಸ್ತೆ ಜೈಲಿಗೆ ಬಿಗಿ ಭದ್ರತೆ, ಆತನ ಆರೋಗ್ಯ ಚಿಕಿತ್ಸೆಗಾಗಿ ಜೆಜೆ ಆಸ್ಪತ್ರೆಯಲ್ಲಿ ಭದ್ರತೆಗಾಗಿ ವಿನಿಯೋಗಿಸಿದ ಹಣ, ಆತನ ಆರೋಗ್ಯ ಪರೀಕ್ಷೆಗಾಗಿ ತಜ್ಞ ವೈದ್ಯರಿಗೆ ನೀಡಿದ ಹಣ, ರಾಜ್ಯ ಮತ್ತು ಕೇಂದ್ರಿಯ ಮೀಸಲು ಪಡೆ ಎಲ್ಲವೂ ಸೇರಿದರೆ ಕಸಬ್ ಗೆ ಸರಕಾರ 31 ಕೋಟಿ ರುಪಾಯಿ ವ್ಯಯಿಸಿದೆ. ಇದು ದುಬಾರಿಯಾದರೂ ಅನಿವಾರ್ಯ ಎಂದು ಅವರು ಹೇಳಿದರು.
26/11 ರ ಕರಾಳ ದಿನದ ವರ್ಷಾಚರಣೆ ಇಂದು. ಈ ಸಮರದಲ್ಲಿ ಹೇಮಂತ್ ಕರ್ಕರೆ, ವಿಜಯ್ ಸಲಸ್ಕರ್, ಅಶೋಕ್ ಕಾಮ್ಟೆ, ಸಂದೀಪ್ ಉನ್ನಿಕೃಷ್ಣನ್ ನಂತಹ ಸೇನಾನಿಯನ್ನು ಕಳೆದುಕೊಂಡ ದಿನ. ಇದು ಅತ್ಯಂತ ನೋವಿನ ಸಂಗತಿ. ದೇಶಕ್ಕಾಗಿ ಪ್ರಾಣ ಕಳೆದುಕೊಂಡು ಸೇನಾನಿಗಳ ಆತ್ಮಕ್ಕೆ ಶಾಂತಿ ಸಿಗಲಿ ಎನ್ನುವುದು 110 ಕೋಟಿ ಭಾರತೀಯರ ಮಹದಾಸೆಯಾಗಿದೆ.
(ಏಜನ್ಸೀಸ್)