ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತರೀಕೆರೆ ಏರಿಮೇಲೆ ಚಿರತೆಮರಿ

By * ಶ್ರೀನಾಥ್ ನಾಡಿಗ್, ತರೀಕೆರೆ
|
Google Oneindia Kannada News

Cheetah cubs saved in Tarikere
ತರೀಕೆರೆ, ನ.23:ತಾಯಿಯಿಂದ ದೂರವಾಗಿ ದಾರಿ ತಪ್ಪಿದ ಮೂರು ಪುಟಾಣಿ ಚಿರತೆ ಮರಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿಯ ಸಹಾಯದಿಂದ ಸುರಕ್ಷಿತವಾಗಿ ಮರಳಿಗೂಡಿಗೆ ಸೇರಿಸಿದ ಘಟನೆ ತರೀಕೆರೆ ತಾಲ್ಲೂಕಿನ ಹಾದಿಕೆರೆ ಬಳಿಯ ಗಣೇಶಪುರ ಗ್ರಾಮದಲ್ಲಿ ಭಾನುವಾರ ನಡೆದಿದೆ.

ಮೇಕೆ ಮರಿಗಳನ್ನು ಹುಡುಕಿಕೊಂಡು ಹೊರಟ ರೈತ ರಮೇಶ ಎಂಬುವವರಿಗೆ ತಮ್ಮ ತೋಟದ ಮೂಲೆಯೊಂದರಲ್ಲಿ ಕೇಳಿ ಬಂದ ಬುಸುಗುಡುವ ಶಬ್ದ ಕೇಳಿ ಅನುಮಾನಗೊಂಡರು. ಇಣುಕಿ ನೋಡಿಗಾದ ಅರ್ಧ ಭಾಗ ಛಿದ್ರಗೊಂಡ ಮೇಕೆಯ ಶವದ ಬಳಿ ಚಿರತೆ ಮರಿಗಳು ಆಡುತ್ತಿದ್ದವು.

ನಂತರ ರಮೇಶ್ ಅವರು ತಕ್ಷಣ ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದರು. ಸ್ಥಳಕ್ಕೆ ಆಗಮಿಸಿದ ತರೀಕೆರೆಯ ವೃತ್ತ ನೀರಿಕ್ಷಕ ಶರಣಪ್ಪ ಮತ್ತು ಸಿಬ್ಬಂದಿ ವರ್ಗ ಹಾಗು ಅರಣ್ಯ ಅಧಿಕಾರಿಗಳು ಚಿರತೆ ಮರಿಗಳಿಗೆ ಹಾಲು ಕುಡಿಸಿ ತರೀಕೆರೆ ಕಾಡಿನಲ್ಲಿ ಬಿಟ್ಟು ಬಂದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X