For Daily Alerts
ರೆಡ್ಡಿಗಳನ್ನು ವಿಲನ್ ಗಳಂತೆ ಬಿಂಬಿಸುತ್ತಿರುವುದೇಕೆ?
ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾದ ನಂತರ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ ಶೆಟ್ಟರ್ ಅವರನ್ನು ಭವ್ಯವಾಗಿ ಸ್ವಾಗತಿಸಲಾಯಿತು. ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ತಮ್ಮ ಮನೆ ತಲುಪಿದ ಶೆಟ್ಟರ್, ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಬಿಜೆಪಿ ಸರಕಾರ ರಚನೆ ಮಾಡುವಾಗ ರೆಡ್ಡಿಗಳು ಬೇಕಿತ್ತು. ಆದರೆ, ಇದೀಗ ರೆಡ್ಡಿ ಏಕೆ ಬೇಡವಾಗಿದ್ದಾರೆ? ಬಿಜೆಪಿ ಸರಕಾರ ಅಧಿಕಾರಕ್ಕೆ ತರಲು ಅವರನ್ನು ಎಲ್ಲ ರೀತಿಯಿಂದಲೂ ಬಳಿಸಿಕೊಂಡು ಇದೀಗ ವಿಲನ್ ಗಳಂತೆ ಬಿಂಬಿಸುವ ಯತ್ನ ಸಾಗಿರುವುದು ನಿಜಕ್ಕೂ ನೋವಿನ ಸಂಗತಿ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮೀಣಾಭಿವೃದ್ಧಿ ಸಚಿವರಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಶೆಟ್ಟರ್, ಗ್ರಾಮೀಣ ಪ್ರದೇಶದಿಂದ ಬಂದವನಾದ್ದರಿಂದ ಗ್ರಾಮೀಣ ಭಾಗದ ಜನರ ನೋವು ನಲಿವು ನನಗೆ ಗೊತ್ತಿದ್ದರಿಂದ ಜನಪರ ಕೆಲಸ ಮಾಡಲು ಮತ್ತಷ್ಟು ಅನುಕೂಲವಾಗಲಿದೆ ಎಂದರು. ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಶೆಟ್ಟರ್ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)
yediyurappa ಯಡಿಯೂರಪ್ಪ ಹುಬ್ಬಳ್ಳಿ hubballi jagadish shettar ಜಗದೀಶ್ ಶೆಟ್ಟರ್ rural development ಗ್ರಾಮೀಣಾಭಿವೃದ್ಧಿ reddy brothers ರೆಡ್ಡಿ ಬ್ರದರ್ಸ್
Story first published: Friday, November 20, 2009, 15:50 [IST]