ದತ್ತ ಪಾದುಕೆಗೆ ಡಿ.1ರಂದು ಪೂಜೆ
ನಗರ ಬಸ್ ನಿಲ್ದಾಣ ವೃತ್ತದಲ್ಲಿ ಅಂತರಗಂಗೆಗೆ ಭಜರಂಗದಳ ಏರ್ಪಡಿಸಿದ್ದ ಉಚಿತ ಬಸ್ ಸೇವೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಯುವಕರಲ್ಲಿ ಧಾರ್ಮಿಕ ಜಗೃತಿ ಮೂಡಿಸಿ ಸಂಘಟಿಸುವ ಕೆಲಸವನ್ನು ಭಜರಂಗದಳ ಮಾಡುತ್ತಿದೆ. ಧರ್ಮ ಉಳಿದರೆ ನಾವು ಉಳಿಯುತ್ತೇವೆ ಎಂಬ ಸತ್ಯವನ್ನು ಅರಿಯಬೇಕಿದೆ ಎಂದವರು ತಿಳಿಸಿದರು. ದಕ್ಷಿಣ ಕಾಶಿಯೆಂದೇ ಪ್ರಖ್ಯಾತಿಯಾಗಿರುವ ಶತಶೃಂಗ ಪರ್ವತದ ಸಾಲಿನಲ್ಲಿರುವ ಅಂತರಗಂಗೆ ಪುಣ್ಯ ಕ್ಷೇತ್ರಕ್ಕೆ ಲಕ್ಷಾಂತರ ಮಂದಿ ಬರುತ್ತಿದ್ದು, ಇವರಿಗಾಗಿ ಭಜರಂಗದಳ ಜಿಲ್ಲಾ ಶಾಖೆ ಉಚಿತ ಬಸ್ ಸೇವೆ ಮತ್ತು ಉಪವಾಸ ವ್ರತ ಆಚರಿಸಿ ಬರುವವರಿಗೆ ಪ್ರಸಾದ ವಿತರಣೆ ಕಾರ್ಯ ನಡೆಸಿರುವುದು ಸಂತಸ ತಂದಿದೆ ಎಂದರು.
ಭಜರಂಗದಳದ ಜಿಲ್ಲಾ ಮುಖಂಡ ಡಿ.ಆರ್. ನಾಗರಾಜ್ ಮಾತನಾಡಿ, ಹಿಂದೂ ಬಾಂಧವರಲ್ಲಿ ಭಕ್ತಿ, ಶ್ರದ್ದೆ ಉಂಟುಮಾಡುವ ಈ ಪವಿತ್ರ ಕ್ಷೇತ್ರದಲ್ಲಿ 10 ವರ್ಷಗಳಿಂದ ಸಂಘಟನೆ ಸಾಮಾಜಿಕ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿರುವುದಾಗಿ ಹೇಳಿದರು. ಮುಖಂಡರಾದ ಸತ್ಯಶಂಕರ್, ಭಜರಂಗದಳದ ಬಾಲಾಜಿ, ಅಪ್ಪಿ, ನಂದೀಶ್, ಮುಕುಂದ, ಬಾಬು, ಆನಂದ್, ಸುಗಟೂರು ಚಲಪತಿ ಮತ್ತಿತರರು ಹಾಜರಿದ್ದರು
(ದಟ್ಸ್ ಕನ್ನಡ ವಾರ್ತೆ)