ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಂ, ರೆಡ್ಡಿಗಳಿಗೆ ಸುಷ್ಮಾ ಕಿವಿಮಾತು

By Staff
|
Google Oneindia Kannada News

Sushma Swaraj
ಬೆಂಗಳೂರು, ನ. 19 : ರೆಡ್ಡಿ ಬ್ರದರ್ಸ್ ಜೊತೆಗಿನ ನನ್ನ ಬಾಂಧವ್ಯ ಮತ್ತು ಋಣಾನುಬಂಧ ಯಾವ ರೀತಿಯದ್ದು ಅಂದರೆ ಅವರು ನನ್ನ ಮಕ್ಕಳು. ನಾನು ಅವರ ಕುಟುಂಬದ ಹಿರಿಯಳು. ರಾಜ್ಯ ಸರಕಾರ ರೆಡ್ಡಿ ಬ್ರದರ್ಸ್ ಗಳಿಂದಾಗಿ ಉಳಿದುಕೊಂಡಿದೆ. ಅವರು ಸರಕಾರ ಉಳಿಸುತ್ತಾರೆ ಮತ್ತು ಪಕ್ಷದ ವರ್ಚಸ್ಸು ಬೆಳೆಸುತ್ತಾರೆಯೇ ಹೊರತು ಉರುಳಿಸುವುದಿಲ್ಲ ಎಂದು ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಹೇಳಿದ್ದಾರೆ.

ಶಾಸಕಾಂಗ ಸಭೆಯಲ್ಲಿ ಭಾವೋದ್ವೇಗಕ್ಕೆ ಒಳಗಾಗಿ ಮಾತನಾಡಿದ ಸುಷ್ಮಾ, ನನ್ನ ಮಕ್ಕಳು ಪಕ್ಷವನ್ನು ಎತ್ತರಕ್ಕೆ ಕೊಂಡೊಯ್ಯುತ್ತಾರೆ. ಭಿನ್ನಮತ ಎದುರಾದಾಗಗೆಲ್ಲೆಲ್ಲಾ ಕಾಂಗ್ರೆಸ್ ಇಬ್ಬಾಗವಾಗಿದೆ. ಆದರೆ ನಮ್ಮ ಪಕ್ಷ ಗಟ್ಟಿಯಾಗಿದೆ. ನಮ್ಮ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ 24 ಪಕ್ಷಗಳಿದ್ದವು. ಆಗ ಕೇಳುತ್ತಿದ್ದುದು ಒಂದೇ ಧ್ವನಿ, ಅದು ವಾಜಪೇಯಿ ಅವರದ್ದು. ಆ ಪರಂಪರೆಯನ್ನು ನೀವು ಮುಂದುವರಿಸಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಹಿತವಚನ ನುಡಿದಿದ್ದಾರೆ.

ಬಳ್ಳಾರಿ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿತ್ತು. ಅದನ್ನು ಭೇದಿಸಿದ ಕೀರ್ತಿ ರೆಡ್ಡಿ ಬ್ರದರ್ಸ್ ಗೆ ಸಲ್ಲಬೇಕು. ಹತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿಗೆ ಇವರು ಕಾರಣ. 20 ಕ್ಷೇತ್ರಗಳಲ್ಲಿ ಪಕ್ಷ ಜಯಿಸಿದ್ದು ಇವರ ಪ್ರಭಾವದಿಂದಲೇ. ನೀವು ಹಿರಿಯರು ಮತ್ತು ಜನಪ್ರಿಯ ನಾಯಕರು. ಆಗಿರುವ ಕಹಿ ಘಟನೆ ಮೆರೆತು ಎಲ್ಲರನ್ನು ಒಟ್ಟಾಗಿ ಕರೆದುಕೊಂಡು ಹೋಗಿ ಪಕ್ಷವನ್ನು ಇನ್ನಷ್ಟು ಬಲಪಡಿಸಿ ಎಂದು ಸುಷ್ಮಾ ಸಿಎಂ ಗೆ ಕಿವಿಮಾತು ಹೇಳಿದ್ದಾರೆನ್ನಲಾಗಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X