ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಂದೇಮಾತರಂ ಉರ್ದು ಅನುವಾದಕ್ಕೆ ಮನವಿ

By Staff
|
Google Oneindia Kannada News

Bankimchandra
ಲಕ್ನೋ,ನ.17: ವಂದೇಮಾತರಂ ಹಾಡಿನ ನಿಜವಾದ ಅರ್ಥವನ್ನು ಮುಸ್ಲಿಂ ಸಮುದಾಯ ತಿಳಿದುಕೊಳ್ಳಲು ಉರ್ದು ಬಾಷೆಗೆ ಅನುವಾದಿಸಬೇಕೆಂದು ಕೋರಿ ಅಖಿಲ ಭಾರತ ಶಿಯಾ ವೈಯಕ್ತಿಕ ಕಾನೂನು ಮಂಡಳಿ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದೆ. ವಂದೇಮಾತರಂನ ತರ್ಜುಮೆಯನ್ನು ಶೀಘ್ರ ಒದಗಿಸಬೇಕೆಂದು ಒತ್ತಾಯಿಸಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಮಂಡಳಿ ಅಧ್ಯಕ್ಷ ಮೌಲಾನ ಮಿರ್ಜಾ ಮೊಹಮ್ಮದ್ ಅತ್ತರ್ ಪತ್ರ ಬರೆದಿದ್ದಾರೆ.

ವಂದೇಮಾತರಂನ ಸರಿಯಾದ ಹಾಗೂ ಸ್ಪಷ್ಟವಾದ ಉರ್ದು ಅನುವಾದ ವನ್ನು ಪಡೆಯುವುದರಿಂದ ವಿವಾದಕ್ಕೆ ತೆರೆಯೆಳೆಯಲು ಸಾಧ್ಯ ಎಂದಿರುವ ಅತ್ತರ್, ವಂದೇಮಾತರಂ ಹಾಡುವ ಬಗ್ಗೆ ಎದ್ದಿರುವ ವಿವಾದ ಇಂದಿನದಲ್ಲ ಎಂದು ಹೇಳಿದ್ದಾರೆ.

ಮುಸ್ಲಿಂ ಸಮುದಾಯದ ಒಂದು ವರ್ಗದ ನಾಯಕರು ರಾಷ್ಟ್ರಗೀತೆ ಹಾಡುವ ಬಗ್ಗೆ ಮೊದಲಿನಿಂದಲೂ ವಿರೋಧ ವ್ಯಕ್ತ ಪಡಿಸುತ್ತಲೇ ಬಂದಿದ್ದಾರೆ. ಕೆಲವರು ಮಾತ್ರ ಅದರ ಪರವಾಗಿದ್ದಾರೆ. ಈ ವಿವಾದವನ್ನು ಹೋಗಲಾಡಿಸಲು ವಂದೇಮಾತರಂ ನ ಉರ್ದು ಅನುವಾದಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಮೊಹಮ್ಮದ್ ಅತ್ತರ್ ತಿಳಿಸಿದ್ದಾರೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X